Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಓಂ ಸಾಯಿಪ್ರಕಾಶ್ ಕೈಹಿಡಿಯುವಳೇ ವರಮಹಾಲಕ್ಷ್ಮಿ?
ಈಗ ಮತ್ತೊಂದು ಚಿತ್ರಗನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ವರಮಹಾಲಕ್ಷ್ಮಿ ವ್ರತ' ಮಹಾತ್ಮೆ. ಈಗಾಗಲೆ ಹಲವಾರು ಭಕ್ತಿ ಪ್ರಧಾನ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಅಭಿನಯ ಶಾರದೆ ಜಯಂತಿ ಅವರ ಮುದ್ದಿನ ಸೊಸೆ ಅನು ಪ್ರಭಾಕರ್ ಚಿತ್ರದ ನಾಯಕಿ.
ಅನು ಪ್ರಭಾಕರ್ ಅಭಿನಯದ 'ಶ್ರೀ ದಾನಮ್ಮ ದೇವಿ' ಚಿತ್ರ ಯಶಸ್ವಿ 100 ದಿನಗಳನ್ನು ಪೊರೈಸಿತ್ತು. ಉತ್ತರ ಕರ್ನಾಟಕಕ್ಕೆ ಅನು ಅವರೇನಾದರೂ ಭೇಟಿ ನೀಡಿದರೆ ಅವರನ್ನು ಸಾಕ್ಷಾತ್ ದೇವತೆಯಂತೆ ಕಾಣುವ ಭಕ್ತ ಸಮೂಹವೇ ಇದೆ. 'ದಾನಮ್ಮ ದೇವಿ' ಪಾತ್ರ ಅಷ್ಟೊಂದು ಪರಿಣಾಮ ಬೀರಿತ್ತು.
'ನವ ಶಕ್ತಿ ವೈಭವ' ಎಂಬ ಚಿತ್ರದಲ್ಲೂ ಅನು ಪ್ರಭಾಕರ್ ಅಭಿನಯಿಸಿದ್ದರು. 'ಪರೀಕ್ಷೆ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ 2009-10ನೇ ಸಾಲಿನ ರಾಜ್ಯ ಪ್ರಶಸ್ತಿಗೂ ಅನು ಭಾಜನರಾಗಿದ್ದಾರೆ. ಓಂ ಸಾಯಿಪ್ರಕಾಶ್ ಈಗ ಅನು ಪ್ರಭಾಕರ್ ಅವರಿಗೆ ವರಲಕ್ಷ್ಮಿ ಪಾತ್ರ ಕೊಟ್ಟಿದ್ದಾರೆ.
ಚಿತ್ರದ ಪಾತ್ರವರ್ಗದಲ್ಲಿ ಹರೀಶ್ ರಾಜ್, ರವಿ ಚೇತನ್, ಬುಲ್ಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ ಮುಂತಾದವರಿದ್ದಾರೆ. ರಮೇಶ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಕ್ಲೈನ್ ಸ್ಟುಡಿಯೋದಲ್ಲಿ ಅದ್ಭುತ ಸೆಟ್ಟನ್ನು ಹಾಕಲಾಗಿದೆ. ರಾಜೇಶ್ ರಾಮನಾಥ್ ಸಂಗೀತ, ಜೆ ಜಿ ಕೃಷ್ಣ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಾಯಿಪ್ರಕಾಶ್ ಅವರನ್ನು ವರಮಹಾಲಕ್ಷ್ಮಿ ಈ ಬಾರಿಯಾದರೂ ಕೈಹಿಡಿಯುತ್ತಾಳಾ? ಕಾದುನೋಡೋಣ. (ಒನ್ಇಂಡಿಯಾ ಕನ್ನಡ)