Don't Miss!
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ ತೇಲಿ ಬಂದ 'ಪೇಪರ್ ದೋಣಿ'
ಜೈಸುಮನ್ ಅವರು ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಹಲವಾರು ಹೆಸರಾಂತ ನಿರ್ದೇಶಕರ ಜೊತೆ ಹಾಗೂ ನಿರ್ದೇಶಕ ನಾಗಣ್ಣ ಅವರ ಹೆಚ್ಚಿನ ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ಆರ್.ಕೆ. ನಾಯಕ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಶ್ರೀರಾಜರಾಜೇಶ್ವರಿ ಕ್ರಿಯೇಷನ್ಸ್ ಮೂಲಕ ಜಿ. ಜನಾರ್ಧನ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದೊಂದು ವಿಭಿನ್ನ ಕಥಾನಕವಾಗಿದ್ದು, ಯುವಕರು ಮನಸ್ಸು ಮಾಡಿದರೆ ಎಂಥಾ ಮಹತ್ಕಾರ್ಯವನ್ನಾದರೂ ಸಾಧಿಸಬಹುದು. ಅದಕ್ಕೊಂದು ಸ್ಫೂರ್ತಿ ಇರಬೇಕು. ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡರೆ ಏನನ್ನಾದರೂ ಸಾಧಿಸಬಹುದು. ಅದು ಹಠದಿಂದ ಆಗಬಹುದು, ಪ್ರೀತಿಯಿಂದ ಅಥವಾ ಛಲದಿಂದಲೂ ಆಗಬಹುದು. ಸಾಧಿಸಲು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಇದೇ ಎಳೆಯನ್ನಿಟ್ಟುಕೊಂಡು 'ಪೇಪರ್ ದೋಣಿ' ಚಿತ್ರದ ಕಥೆ-ಚಿತ್ರಕಥೆಯನ್ನು ನಿರ್ದೇಶಕ ಆರ್.ಕೆ. ನಾಯಕ ರಚಿಸಿದ್ದಾರೆ.
ಆನಂದ್ ಅವರ ಛಾಯಾಗ್ರಹಣ, ರಾಜೇಶ್ ಅವರ ಸಹನಿರ್ದೇಶನ, ಚಂದು ಅವರ ಸಂಕಲನ ಈ ಚಿತ್ರಕ್ಕಿದ್ದು, ಸು.ರುದ್ರುಮುನಿ ಶಾಸ್ತ್ರಿ, ಮಹೇಶ ಮಳವಳ್ಳಿ, ಆನಂದರಾಮ್, ದಿನೇಶ್ ಬಾಬು ಸಾಹಿತ್ಯ ರಚಿಸಿದ್ದಾರೆ. ನವೀನ್ ಕೃಷ್ಣ ಹಾಗೂ ಶಾಂತಲಾ ಈ ಚಿತ್ರದ ನಾಯಕ-ನಾಯಕಿ ಪಾತ್ರದಲ್ಲಿದ್ದು, ಜಗದೀಶ ಪವಾರ್ ಎರಡನೇ ನಾಯಕನಾಗಿದ್ದಾರೆ. ಪರಮೇಶ ಹರ್ತಿ ಎಂಬ ಹೊಸ ಪ್ರತಿಭೆ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸುದೀಪ್,
ರಮ್ಯಾ
ಚಿತ್ರದಲ್ಲಿ
ಖಳನಟನಾಗಿ
ಕೆ.ಮಂಜು!
ಕನ್ನಡ
ನಿರ್ಮಾಪಕರಿಗೆ
ಕಾಯ್ಕಿಣಿ
ಕಿವಿಮಾತು
ತಮಿಳಿನ
'ಅನ್ನಿಯನ್'
ಕನ್ನಡದಿಂದ
ಕದ್ದ
ಕತೆಯೇ?
ಜೊತೆಗಾರನಿಗೆ
ಲವ್ಲಿಸ್ಟಾರ್
ಪ್ರೇಮ್
ಎಳ್ಳುನೀರು!