twitter
    For Quick Alerts
    ALLOW NOTIFICATIONS  
    For Daily Alerts

    ಹಣಕ್ಕಿಂತ ನಿಮ್ಮ ಅಭಿಮಾನ ದೊಡ್ಡದು: ರಜನಿಕಾಂತ್

    By Rajendra
    |

    ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಹಾರಿದ್ದಾರೆ. ಆದರೆ ಅವರ ಅಭಿಮಾನಿಗಳಲ್ಲಿ ಆತಂಕ ಮಾತ್ರ ಎಳ್ಳಷ್ಟು ಕಡಿಮೆಯಾಗಿಲ್ಲ. ಈ ಆತಂಕವನ್ನು ನಿವಾರಿಸಲು ಸ್ವತಃ ತಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿ ಅಭಿಮಾನಿಗಳಿಗೆ ರವಾನಿಸಿದ್ದಾರೆ. ಅದರಲ್ಲಿ ಅವರು ಹೇಳಿರುವುದೇನೆಂದರೆ...

    "ನಾನು ಆರೋಗ್ಯವಾಗಿದ್ದೇನೆ. ನಟನೆಯಿಂದ ನಾನು ಸಾಕಷ್ಟು ಗಳಿಸಿದೆ.ಹಣಕ್ಕಿಂತ ಹೆಚ್ಚಾಗಿ ನಿಮ್ಮ ಅಭಿಮಾನ ದೊಡ್ಡದು. ನನ್ನ ಅಭಿಮಾನಿಗಳು ದೇವರಿದ್ದಂತೆ. ನಿಮ್ಮ ಶುಭ ಹಾರೈಕೆ ಜೊತೆಗೆ ದೇವರ ಆಶೀರ್ವಾದ ಇರಲಿ. ನಾನು ಸಿಂಗಪುರಕ್ಕೆ ಹೊರಡುತ್ತಿದ್ದೇನೆ. ಓಕೆ, ಬಾಯ್" ಎಂದಿದ್ದಾರೆ. [ವಿಡಿಯೋ ನೋಡಿ]

    ಶೀಘ್ರದಲ್ಲೆ ತಾನು ಚೆನ್ನೈಗೆ ಹಿಂತಿರುಗುತ್ತೇನೆ ಎಂದು ರಜನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಟಾಟಾ ಬಾಯ್ ಬಾಯ್ ಹೇಳಿ ಸಿಂಗಪುರದಲ್ಲಿ ಇಳಿಯುತ್ತಿದ್ದಂತೆ ಅಲ್ಲೂ ಅಪಾರ ಅಭಿಮಾನಿಗಳು ರಜನಿ ಅವರಿಗೆ ಮುಖಾಮುಖಿಯಾಗಬೇಕಾಯಿತು. ಮುಂಜಾನೆ 6 ಗಂಟೆಗೆ ಅವರು ಸಿಂಗಪುರ ತಲುಪಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Rajinikanth sent out a voice message to his fans around the world. In his message, the ailing superstar told, "I am doing well. I made money through acting in films but you people out there has given me a lot of love in return. My fans are like Gods and now I need your blessings and good wishes as I proceed to Singapore. OK, Bye."
    Saturday, May 28, 2011, 18:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X