ಸುದೀಪ್ ವರದ ನಾಯಕನಿಗೆ ಲೈಟ್ಸ್ ಕೆಮೆರಾ ಆಕ್ಷನ್!
ಕನ್ನಡದಲ್ಲಿ ಮತ್ತೊಂದು ಬಹುತಾರಾಗಣದ ಚಿತ್ರ ಸೆಟ್ಟೇರಿದೆ. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ವರದನಾಯಕ' ಚಿತ್ರೀಕರಣ ಆರಂಭವಾಗಿದೆ. ಅಯ್ಯಪ್ಪ ಶರ್ಮ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರವನ್ನು ಶಂಕರೇಗೌಡ ನಿರ್ಮಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಜೊತೆಗೆ ಅರ್ಜುನ್ ಸರ್ಜಾ, ಪ್ರಿಯಾಮಣಿ ಪಾತ್ರವರ್ಗದಲ್ಲಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇದೊಂದು ರೀಮೇಕ್ ಚಿತ್ರವಾಗಿದ್ದು ತೆಲುಗಿನ ಯಶಸ್ವಿ 'ಲಕ್ಷ್ಮಂ' ಚಿತ್ರವನ್ನು ಕನ್ನಡಕ್ಕೆ ತರಲಾಗುತ್ತಿದೆ.
ತೆಲುಗು ಚಿತ್ರದಲ್ಲಿ ಜಗಪತಿ ಬಾಬು, ಗೋಪಿಚಂದ್ ಹಾಗೂ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದರು. ಜಗಪತಿ ಬಾಬು ಪಾತ್ರವನ್ನು ಸುದೀಪ್ ಕನ್ನಡದಲ್ಲಿ ಮಾಡಲಿದ್ದಾರೆ. ಕನ್ನಡದ ಜಾಯಮಾನಕ್ಕೆ ತಕ್ಕಂತೆ ಹಾಗೂ ಕೆಲವು ಬದಲಾವಣೆಗಳೊಂದಿಗೆ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಶಂಕರೇಗೌಡ ತಿಳಿಸಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)
More from Filmibeat
English summary
Kichcha Sudeep multistarrer Kannada movie Varadanayaka starts shooting. The movie has action king Arjun and Chiranjeevi Sarja and Priyamani in the cast. Varadanayaka is the remake of the Telugu super hit Lakshyam producing by Shankare Gowda.
ಸುದೀಪ್ ಅರ್ಜುನ್ ಸರ್ಜಾ ಪ್ರಿಯಾಮಣಿ ರೀಮೇಕ್ ಚಿರಂಜೀವಿ ಸರ್ಜಾ sudeep arjun sarja priyamani remake chiranjeevi sarja


Click it and Unblock the Notifications











