Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಜ್ಮಹಲ್ ಮತ್ತು ಸುನೀಲ್ರಾವ್!
ತಾಜ್ಮಹಲ್ ಚಿತ್ರ ಹಲವರ ಹಣೆಬರಹ ಬದಲಿಸಿದ ಕಥೆ ಗೊತ್ತಲ್ಲ.ಚಂದ್ರು ಎನ್ನುವ ಕನಸುಕಂಗಳ ನಿರ್ದೇಶಕ ಕೋಟಿ ರೂಪಾಯಿ ಸಂಭಾವನೆ ಬಗ್ಗೆ ಮಾತನಾಡುವ ಯಕ್ಷಿಣಿಗೆ ಈ ಚಿತ್ರವೇ ಕಾರಣ. ಆರಕ್ಕೇರದೆ ಚಡಪಡಿಸುತ್ತಿದ್ದ ಅಜಯ್ ಎನ್ನುವ ಹುಡುಗ ನಾಯಕನಾಗಿ ಒಂದಷ್ಟು ಅವಕಾಶ ಕಾಣಲಿಕ್ಕೂ ಈ ಚಿತ್ರವೇ ಕಾರಣ. ಇಂತಿಪ್ಪ ತಾಜ್ಮಹಲ್ ಚಿತ್ರವನ್ನು ಸುನೀಲ್ ರಾವ್ ಒಲ್ಲೆ ಎಂದಿದ್ದರಾ?
ನಿರ್ದೇಶಕ ಚಂದ್ರು ಪ್ರಕಾರ, ಸುನೀಲ್ರಾವ್ ಬಾಗಿಲಿಗೆ ಬಂದ ಅದೃಷ್ಟವನ್ನು ಒದ್ದಿದ್ದು ಸತ್ಯ. ತಾಜ್ಮಹಲ್ಗೆ ನಾನು ಮೊದಲು ಸಂಪರ್ಕಿಸಿದ್ದು ಸುನೀಲ್ ಅವರನ್ನುಆತ ಒಲ್ಲೆ ಎಂದ. ಆ ಕಾರಣಕ್ಕೆ ಅದೃಷ್ಟ ಅಜಯ್ಗೊಲಿಯಿತು ಎಂದು ಚಂದ್ರು ಅನೇಕ ಕಡೆ ಹೇಳಿಕೊಂಡಿದ್ದಾರೆ. ಈ ಸುದ್ದಿ ಪತ್ರಿಕೆಗಳಲ್ಲೂ ಪ್ರಕಟವಾಗಿದೆ.
ಸುನೀಲ್ ಯಾಕೆ ಹೀಗೆ ಮಾಡಿದರು?
ಅಪರಾಧಿ ನಾನಲ್ಲ ಎನ್ನುವುದು ಅವರ ಸ್ಪಷ್ಟನೆ. ಈ ಬಗ್ಗೆ ಅವರು ದಟ್ಸ್ಕನ್ನಡಕ್ಕೆ ಹೇಳಿದ್ದು:
ಚಂದ್ರು ನಮ್ಮ ಮನೆಗೆ ಬಂದು ಕಥೆ ಹೇಳಿದ್ದು ನಿಜ. ನಾನಾಗ ಅಮೆರಿಕಗೆ ಹೊರಟು ನಿಂತಿದ್ದೆ. ವಾಪಸ್ಸು ಬಂದ ನಂತರ ಮತ್ತೊಮ್ಮೆ ಭೇಟಿಯಾಗಿ ಕಥೆ ಹೇಳುವುದಾಗಿ ಚಂದ್ರು ಹೇಳಿದ್ದರು. ಆದರೆ, ಮರಳಿ ಊರಿಗೆ ಬಂದಾಗ ನನ್ನನ್ನು ಭೇಟಿಯಾದದ್ದು ಚಂದ್ರು ಅವರಲ್ಲ, ವದಂತಿಗಳು. ಆತ ಯಾಕೆ ಹೀಗೆ ಆಪಾದಿಸಿದರೋ ಗೊತ್ತಿಲ್ಲ. ಬರೆಯುವವರಾದರೂ ನನ್ನನ್ನೊಂದು ಮಾತು ಕೇಳಬಹುದಿತ್ತು.
ಸದ್ಯಕ್ಕೆ ಸುನೀಲ್, 'ಮಿನುಗು' ಹಾಗೂ 'ಸರಿಗಮ' ಎನ್ನುವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡು ಚಿತ್ರಗಳ ಬಗೆಗೂ ಅವರಿಗೆ ಅಪಾರ ನಿರೀಕ್ಷೆಗಳಿವೆ.
ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಅನ್ನೋದು ಸುನೀಲ್ ಪಾಲಿಸಿ. ವದಂತಿಗಳನ್ನು ಹಬ್ಬಿಸುವವರು ಹಬ್ಬಿಸುತ್ತಿರಲಿ, ನನ್ನ ಹಾಡು ನನ್ನ ಪಾಡು ಎನಗಿರಲಿ ಎಂದು ಸುನೀಲ್ ಮಾತು ಮುಗಿಸಿದರು.
ಪೂರಕ
ಓದಿಗೆ
ಚಿತ್ರವಿಮರ್ಶೆ:
ತಾಜ್
ಮಹಲ್.ಎಂಥಾ
ಸ್ವಾದ!
ಪೂಜಾಗಾಂಧಿ,
ಅಜಯ್
ಅವರ
ತಾಜ್
ಮಹಲ್
ಟ್ರೈಲರ್