Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಗರಾಜ್ ಭಟ್-ಯಶ್ ಸೇರಿ ಮಾಡ್ತಾರೆ 'ಡ್ರಾಮಾ'
ನಿರ್ದೇಶಕ ಯೋಗರಾಜ್ ಭಟ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದಾಗಿದ್ದಾರೆ. ಇವರಿಬ್ಬರ ಸಂಗಮದಲ್ಲಿ ಸಿನಿಮಾವೊಂದು ಸೆಟ್ಟೇರುತ್ತಿದೆ. ಸಿನಿಮಾ ಹಸರೇ 'ಡ್ರಾಮಾ'. ಅಡಿಬರಹ "ಇನ್ನೂ ಈ ಕಣ್ ನಲ್ಲಿ ಏನೇನ್ ನೋಡ್ಬೇಕಪ್ಪಾ?!." ನಿರ್ದೇಶಕರಾಗಿ ಈ ಡ್ರಾಮಾ ಆಡಿಸುವವರು .ಪರಮಾತ್ಮ. ಯೋಗರಾಜ್ ಭಟ್.
ಈ ಡ್ರಾಮಾ ಪಾತ್ರಧಾರಿಗಳು ನಟ ಯಶ್, ನೀನಾಸಂ ಸತೀಶ್, ಭಾಮಾ ಹಾಗೂ ಪ್ರಜ್ಞಾ. ಚಿತ್ರ ನಿರ್ಮಾಣ ಮಾಡುತ್ತಿರುವವರು ಪರಮಾತ್ಮ ಚಿತ್ರ ನಿರ್ಮಾಪಕ ಜಯಣ್ಣ. ಸಂಗೀತ ನೀಡುತ್ತಿದ್ದಾರೆ, ವಿ. ಹರಿಕೃಷ್ಣ. ಕ್ಯಾಮರಾದಲ್ಲಿ ಕೈಚಳಕ ತೋರಿಸಲಿದ್ದಾರೆ ಕೃಷ್ಣ. ಮಿಕ್ಕ ಡೀಟೇಲ್ಸ್ ಸದ್ಯದಲ್ಲೇ ಹೊರಬೀಳಲಿದೆ.
ಈಗಾಗಲೇ ಭಟ್ಟರು ಅನಂತ್ ನಾಗ್, ಟಬು ಜೋಡಿಯ ಚಿತ್ರವೊಂದರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಾಗಿದೆ. ಕೇಳಿದವರಿಗೆಲ್ಲ ಇಲ್ಲ ಅನ್ನದೇ ಹಾಡು ಬರೆದುಕೊಟ್ಟು ಖುಷಿ ಪಡಿಸುತ್ತಿರುವುದು ಮಾಮೂಲು. ಪರಮಾತ್ಮ ನಂತರ ಭಟ್ಟರು ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಲಿದೆ. (ಒನ್ ಇಂಡಿಯಾ ಕನ್ನಡ)