Don't Miss!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಮೇಲೆ ಮಾನಭಂಗದ ಯತ್ನ
ಈಕೆಯ ಹೆಸರು ವಿಂಧ್ಯಾ. ಉದಯೋನ್ಮುಖ ತಮಿಳು ನಟಿ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿಗೆ ಚಿತ್ರದ ಚಿತ್ರೀಕರಣಕ್ಕಾಗಿ ಬಂದಿದ್ದ ವಿಂಧ್ಯಾ ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ .
ಹೊಟೇಲೊಂದರಲ್ಲಿ ಉಳಿದುಕೊಂಡಿದ್ದ ವಿಂಧ್ಯಾಳ ಮೇಲೆ ಸ್ಥಳೀಯ ಉದ್ಯಮಿಯಾಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಈಗ ಪೊಲೀಸರ ಆತಿಥ್ಯ ಅನುಭವಿಸುತ್ತಿದ್ದಾನೆ. ಈ ಘಟನೆ ನಡೆದದ್ದು ಫೆ.26ರ ಗುರುವಾರ.
ಹೊಟೇಲಿನ ಹಿಂದಿನ ಬಾಗಿಲಿನಿಂದ ಕೋಣೆ ಪ್ರವೇಶಿಸಿರುವ ಸ್ಥಳೀಯ ಉದ್ಯಮಿ ವಿಂಧ್ಯಾಳ ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ. ಆ ಸಮಯದಲ್ಲಿ ಆತ ಪಾನಮತ್ತನಾಗಿದ್ದ ಎನ್ನಲಾಗಿದ್ದ . ಕೋಣೆಯಲ್ಲಿಯೇ ಇದ್ದ ನಟಿಯ ತಂದೆ ಯೋಗಾನಂದ್ ಹಾಗೂ ಕೆಮರಾಮನ್ ರಮಣ ಅವರು ಉದ್ಯಮಿಯನ್ನು ತಡೆಯುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ . ಕೊನೆಗೆ ಅಕ್ಕಪಕ್ಕದ ಕೋಣೆಗಳ ಸಹನಟರು ವಿಂಧ್ಯಾಳ ಕೋಣೆಗೆ ಧಾವಿಸಿದ್ದರಿಂದ ಅನಾಹುತ ತಪ್ಪಿಹೋಯಿತು.
ನಟಿಯಾಬ್ಬಳ ಮೇಲೆ ಅತ್ಯಾಚಾರದ ಪ್ರಯತ್ನ ನಡೆದಿದ್ದರೂ ಪೊಲೀಸರು ಮಾತ್ರ ತಕ್ಷಣ ಕಾರ್ಯಶೀಲರಾಗಿಲ್ಲ . ಸ್ಥಳೀಯ ಉದ್ಯಮಿ ಪ್ರಭಾವಿಯಾಗಿರುವುದೇ ಇದಕ್ಕೆ ಕಾರಣ. ನಾಯಕ ನಟ ಹಾಗೂ ನಡಿಗರ್ ಸಂಗಮ್ ಅಧ್ಯಕ್ಷ ವಿಜಯಕಾಂತ್ ಮಧ್ಯಪ್ರವೇಶಿಸಿದ ನಂತರವೇ ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಿನಿಮಾ ನಟಿಯ ಪಾಡೇ ಹೀಗಾದರೆ ಇನ್ನು ಬಡಪಾಯಿ ಹೆಣ್ಣುಮಕ್ಕಳ ಪಾಡೇನು ?
(ಏಜನ್ಸೀಸ್)
ಮುಖಪುಟ / ಸ್ಯಾಂಡಲ್ವುಡ್