twitter
    For Quick Alerts
    ALLOW NOTIFICATIONS  
    For Daily Alerts

    ‘ಮಸಾಲ’ನಾಗಶೇಖರ್‌ ಚಿತ್ರದಲ್ಲಿ ಕಾಮಿಡಿ ಟೈಂ ಗಣೇಶ್‌!

    By Super
    |

    Actor Nagashekhar
    ರಾಧಿಕಾ ನಟನೆಯ 'ಮಸಾಲ" ಚಿತ್ರದಲ್ಲಿ ಗಲೀಜಾಗಿ ನಟಿಸಿದ್ದರೂ ನಾಗಶೇಖರ್‌ ಒಬ್ಬ ಕಲಾವಿದ ಅನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಸದ್ಯಕ್ಕೆ ಚಲಾವಣೆಯಲ್ಲಿರುವ ಈ ಹಾಸ್ಯ ನಟ, ನಿರ್ದೇಶಕ ಅನ್ನಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಕತೆ, ಚಿತ್ರಕತೆಯನ್ನು ಬರೆದು ಆ್ಯಕ್ಷನ್‌-ಕಟ್‌ ಹೇಳುವ ಅವರ ಬಹುದಿನದ ಹಂಬಲ, ನಿಜವಾಗುವ ದಿನಗಳು ಹತ್ತಿರದಲ್ಲಿಯೇ ಇವೆ. ನಾಗಶೇಖರ್‌ ಚಿತ್ರದಲ್ಲಿ ನಟಿಸಲು, ಸ್ಯಾಂಡಲ್‌ವುಡ್‌ನ ಸದ್ಯದ ಓಡುವ ಕುದುರೆ 'ಕಾಮಿಡಿ ಟೈಂ" ಗಣೇಶ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಚಿತ್ರದ ಕತೆ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿರುವ ನಾಗಶೇಖರ್‌, ಏನ್‌ ಬೇಕಾದರೂ ಕೇಳಿ, ಕತೆ ತಂಟೆಗೆ ಬರಬೇಡಿ ಎನ್ನುತ್ತಿದ್ದಾರೆ!

    ಚಿತ್ರಕತೆ ಬರೆಯಲು ಸುಮಾರು 1ವರ್ಷ ತೆಗೆದುಕೊಂಡಿರುವ ನಾಗಶೇಖರ್‌, ಅತ್ಯಂತ ಶ್ರದ್ಧೆಯಿಂದ ಹೊಸ ಜವಾಬ್ದಾರಿ ನಿರ್ವಹಿಸಲು ಮಾಡಿರುವ ಹೋಮ್‌ವರ್ಕ್‌ ಕಡಿಮೆಯೇನಿಲ್ಲ. ಚೊಚ್ಚಲ ಚಿತ್ರಕ್ಕೆ ಚೆಂದದ ಹಾಡುಗಳನ್ನು ಮಾಡಲು ಬಯಸಿರುವ ಅವರು, ಚಿತ್ರದ ಸಂಗೀತಕ್ಕಾಗಿ ಇಳಯರಾಜರ ಬೆನ್ನು ಹತ್ತಿದ್ದಾರೆ. ನೇರವಾಗಿ ಈ ಬಗ್ಗೆ ಇಳಯರಾಜ ಜೊತೆ ಪುಟ್ಟ ಮಾತುಕತೆ ಸಹಾ ನಡೆಸಿದ್ದಾರೆ.

    ಕೆ.ಮಂಜು ಸಿನಿಮಾ ನಿರ್ಮಾಣಕ್ಕೆ ಆಸಕ್ತಿವಹಿಸಿದ್ದು, ಎಲ್ಲವೂ ಸುಸೂತ್ರವಾದರೆ, ಹೊಸ ನಿರ್ದೇಶಕನ ಸ್ಥಾನವನ್ನು ನಾಗಶೇಖರ್‌ ಅಲಂಕರಿಸಲಿದ್ದಾರೆ.

    English summary
    Actor Nagashekhar who is planning to direct a new film for which he has written the story and the screenplay has now got a green signal from Ganesh, who is at present the current heartthrob of the Kannada film industry.
    Sunday, October 6, 2013, 15:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X