Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರು? ಮುಂದೆ ಯಾರು? : ‘ರಶ್ಮಿ’ಯತ್ತ ಎಲ್ಲರ ಕಣ್ಣು!
ಕನ್ನಡದಲ್ಲಿ ಮೊದಲಿನಿಂದಲೂ ಇದ್ದದ್ದೇ ಮೂರು ಮುಕ್ಕಾಲು ನಾಯಕಿಯರು! ಶ್ರುತಿ, ಸುಧಾರಾಣಿ ನಂತರ ಬಂದ ‘ರ’ಕಾರ ನಾಯಕಿಯರ(ರಕ್ಷಿತಾ-ರಮ್ಯಾ-ರಾಧಿಕಾ) ದರ್ಬಾರು ಸದ್ಯಕ್ಕೆ ಮುಗಿದಿದೆ.
ರಕ್ಷಿತಾ, ಪ್ರೇಮ್ ತೆಕ್ಕೆಗೆ ಬಿದ್ದರು. ರಾಧಿಕಾ ಇನ್ನೆಲ್ಲೋ ಬಿದ್ದರು. ಅವರು ಮೇಲಕ್ಕೇಳುವ ಲಕ್ಷಣಗಳು ಅತಿ ಕಡಿಮೆ! ಏನೇನೋ ಮಾಡಲು ಹೋದ ರಾಧಿಕಾ, ಪೇಚಿಗೆ ಸಿಲುಕಿದ್ದಾರೆ. ಟ್ಯಾಬ್ಲಾಯ್ಡ್ಗಳ ತುಂಬ ರಾಧಿಕಾ ಲೀಲೆಗಳದೇ ಸುದ್ದಿ. ಮುಖಕ್ಕೆ ಬಿದ್ದ ಮಸಿ ತೊಳೆದುಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕು! ಸ್ಯಾಂಡಲ್ವುಡ್ ಆಳುವ ಕನ್ನಡ ಹುಡುಗಿಯರು ಯಾರು? ಮುಂದ್ಯಾರು ಅನ್ನುವಾಗಲೇ, ಮಂಗಳೂರು ಮೂಲದ ರಶ್ಮೀ ‘ನಾನಿದ್ದೇನೆ’ ಎಂಬಂತೆ ಗಮನ ಸೆಳೆದಿದ್ದಾರೆ.
ಮೊದಲ ಚಿತ್ರ ‘ದುನಿಯಾ’ ಮೂಲಕವೇ ಸದ್ದು ಮಾಡಿದ ರಶ್ಮೀ, ಸದ್ಯಕ್ಕೀಗ ಗಾಂಧಿನಗರದ ಕಣ್ಮಣಿ. ಶೃತಿ ನಿರ್ಮಾಣದ ‘ಅಕ್ಕ ತಂಗಿ’ ಚಿತ್ರಕ್ಕೆ ಈಗಾಗಲೇ ರಶ್ಮೀ ಬುಕ್ ಆಗಿದ್ದಾರೆ. ‘ತುಂತುರು ಮಳೆ’ಯೂ ಅವರ ಪಾಲಾಗಿದೆ. ಈ ಸಿನಿಮಾದ ನಿರ್ದೇಶಕ ಮಹೇಶ್ ಸುಖಧರೆ, ರಶ್ಮೀ ಅಭಿನಯವನ್ನು ಗಂಟೆಗಟ್ಟಲೇ ಹೊಗಳಿದ್ದಾರೆ.
ಮತ್ತೊಂದು ಕಡೆ ‘ದುನಿಯಾ’ ನಾಯಕ ವಿಜಯ್ಗೂ ಒಳ್ಳೆಯ ಪಾತ್ರವೊಂದು ಸಿಕ್ಕಿದೆ. ಅದು ‘ಮುಸ್ಸಂಜೆಯ ಕಥಾ ಪ್ರಸಂಗ’. ಪಿ.ಲಂಕೇಶ್ ಬರೆದ ಈ ಚೆಂದದ ಕಾದಂಬರಿಯನ್ನು ಕವಿತಾ ಲಂಕೇಶ್ ಬೆಳ್ಳಿತೆರೆಗೆ ಅಳವಡಿಸುವ ಪ್ರಯತ್ನದಲ್ಲಿದ್ದಾರೆ. ಅದರಲ್ಲಿ ವಿಜಯ್ಗೆ ಮುಖ್ಯ ಪಾತ್ರವಿದೆಯಂತೆ.