Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೈಂಗಿಕ ಕಾರ್ಯಕರ್ತೆಯರ ಜೊತೆ ಸಂಜಯ್ ರಾಖಿ ಸಂಭ್ರಮ!
ಮುಂಬಯಿ, ಆಗಸ್ಟ್ 28: ಲೈಂಗಿಕ ಕಾರ್ಯಕರ್ತೆಯರು ಆಯೋಜಿಸಿರುವ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ, ಬಾಲಿವುಡ್ ನಟ ಸಂಜಯ್ ದತ್ ಮಂಗಳವಾರ ಪಾಲ್ಗೊಳ್ಳಲಿದ್ದಾರೆ.
ಇಂತಹ ಕಾರ್ಯಕ್ರಮವನ್ನು ಪೀಪಲ್ಸ್ ಹೆಲ್ತ್ ಆರ್ಗನೈಸೇಶನ್ (ಪಿಹೆಚ್ಒ) 1984 ರಿಂದಲೂ ನಡೆಸುತ್ತಾ ಬಂದಿದ್ದು, ಈ ಮುಂಚೆ ಸುನಿಲ್ ದತ್ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು.
ಕಾರ್ಯಕ್ರಮದಲ್ಲಿ ನಟ ಸಂಜಯ್ ದತ್ ಜೊತೆ ಅವರ ಭಾವಂದಿರಾದ ಗೌರವ್ ಮತ್ತು ರಾಂಕನ್ ಸಹ ಪಾಲ್ಗೊಳ್ಳುವರು. ಇವರು ಏಡ್ಸ್ ಪೀಡಿತರಿಗೆ ಸಾಂತ್ವನ ಹೇಳುವರು ಎಂದು ಪಿಹೆಚ್ಒ ಕಾರ್ಯದರ್ಶಿ ಜನರಲ್ ಐ.ಎಸ್.ಗಿಲಾದ ಸುದ್ದಿಗಾರರಿಗೆ ತಿಳಿಸಿದರು.
ಲೈಂಗಿಕ ಕಾರ್ಯಕರ್ತೆಯರನ್ನು ಮುಖ್ಯವಾಹಿನಿಗೆ ತರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಸಂಜಯ್ದತ್ , ಕುಮಾರ್ ಗೌರವ್ ಮತ್ತು ರಾಂಕನ್ ಅವರು ಲೈಂಗಿಕ ಕಾರ್ಯಕರ್ತೆಯರ ಸಾಮಾಜಿಕ ಆರೋಗ್ಯವನ್ನು ಸುಧಾರಿಸಲು ಶ್ರಮಿಸುತ್ತಿದ್ದಾರೆ. ಫಾಲ್ಕ್ಲ್ಯಾಂಡ್ ರಸ್ತೆಯಲ್ಲಿರುವ ನ್ಯೂ ರೋಶನ್ ಸಿನಿಮಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಗಿಲಾದ ಹೇಳಿದರು.
ಸಾರ್ವಜನಿಕ ವರ್ಚಸ್ಸಿನ ಸುನಿಲ್ದತ್ ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಅವರ ಕಲ್ಯಾಣಕ್ಕಾಗಿ ಬೀದಿಗಿಳಿದು ಭಾಗವಹಿಸುತ್ತಿದ್ದರು, ತಮ್ಮ ಕೊನೆಯುಸಿರುವವರೆಗೂ ಪಿಹೆಚ್ಒದ ಅಧ್ಯಕ್ಷರಾಗಿದ್ದರು ಎಂದು ಗಿಲಾದ ನೆನಪು ಮಾಡಿಕೊಂಡರು.
ಚಿತ್ರರಂಗದ ದಂತಕತೆಯಾದ ದಿವಂಗತ ವಿ.ಶಾಂತಾರಾಮ್ ಅವರ ಪುತ್ರರು ಹಾಗೂ ಈಗಿನ ಪಿಹೆಚ್ಪಿ ಅಧ್ಯಕ್ಷರಾದ ಕಿರಣ್ ಶಾಂತಾರಾಮ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
(ಏಜನ್ಸೀಸ್)