ನಲ್ಲ ಸುದೀಪ್ ಕಣ್ಣಂಚಲಿ ನೀರು ತರಿಸಿದ ಗೆಳೆಯರ ಬಳಗ
ತೆರೆಕಂಡ ಒಂದೇ ವಾರಕ್ಕೆ ಎತ್ತಂಗಡಿಯಾದ ಎಷ್ಟೋ ಚಿತ್ರಗಳು ನಮ್ಮ ಮುಂದಿವೆ. ಆದರೆ ನಾಗೇಂದ್ರ ಪ್ರಸಾದ್ ನಿರ್ದೇಶನದ 'ವಿನಾಯಕ ಗೆಳೆಯರ ಬಳಗ' ಚಿತ್ರ ಮೂರನೇ ವಾರ ಪೂರೈಸಿ ಮುನ್ನುಗ್ಗುತ್ತಿದೆ. ನಿಮ್ ಬೀದಿ ಹುಡ್ಗುರ್ ಕಥೆ ಎಂಬ ಅಡಿಬರಹ ಈ ಚಿತ್ರ ಪ್ರೇಕ್ಷಕರನ್ನು 1985ರ ಜನಜೀವನಕ್ಕೆ ಕರೆದೊಯ್ಯುತ್ತದೆ.
ಇನ್ನೂ ಒಂದೆರಡು ವಾರ ಚಿತ್ರಮಂದಿರದಲ್ಲಿ ಗಟ್ಟಿಯಾಗಿ ಕಚ್ಚಿಕೊಂಡರೆ ಬಾಕ್ಸಾಫೀಸಲ್ಲೂ ಸದ್ದು ಮಾಡುವ ಲಕ್ಷಣಗಳಿವೆ. ಈ ಚಿತ್ರದ ಬಗ್ಗೆ ನಲ್ಲ ಸುದೀಪ್ ಮೆಚ್ಚುಗೆ ಮಾತುಗಳನ್ನೂ ಆಡಿರುವುದು ಚಿತ್ರತಂಡಕ್ಕೆ ಆನೆ ಬಲ ಬಂದಂತಾಗಿದೆ. ಚಿತ್ರವನ್ನು ನೋಡಿರುವ ಸುದೀಪ್ ಹೇಳುವುದೇನೆಂದರೆ...ಓವರ್ ಟು ಸುದೀಪ್.
"ಎರಡುವರೆ ಗಂಟೆ ಮೈಮರೆತು ಸಿನಿಮಾ ನೋಡ್ದೆ. ಮನಸು ತುಂಬಾ ನಕ್ಕೆ. ಹೃದಯ ತುಂಬಿ ಬಂತು. ಕ್ಲೈಮ್ಯಾಕ್ಸ್ನಲ್ಲಿ ಕಣ್ಣಂಚಲಿ ನೀರಿತ್ತು. ಇಂತ ವಿಚಾರ ಇರೋ ಸಿನಿಮಾ ಕನ್ನಡದಲ್ಲಿ ಇದೇ ಮೊದಲು. ಡೈಲಾಗ್ ಫ್ರೆಶ್. ವಿಶುಯಲ್ ಫೀಲ್, ಹಾಡುಗಳ ಹಬ್ಬ. ಪರ್ಫಾರ್ಮೆನ್ಸ್ ಬೆಸ್ಟ್. ನಾನು ತುಂಬಾ ತುಂಬಾ ಎಂಜಾಯ್ ಮಾಡಿದ ಸಿನಿಮಾ ಇದು." (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











