Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾಬಾಂಡ್ ರಿಲೀಸ್ ಗೆ 2ದಿನ ಮುನ್ನ ನಿರ್ದೇಶಕರು ಹೇಳಿದ್ದೇನು
ಅಣ್ಣಾಬಾಂಡ್ ಚಿತ್ರದಲ್ಲಿ ಏನೇನು ಎಲೆಮೆಂಟ್ ಗಳು ಇರಬೇಕೆಂದು ಪ್ರೇಕ್ಷಕ ಬಯಸುತ್ತಾನೋ ಅದೆಲ್ಲಾ ಚಿತ್ರದಲ್ಲಿದೆ. ನಿಮಗೆಲ್ಲೂ ಚಿತ್ರ ಬೋರ್ ಹೊಡೆಸುವುದಿಲ್ಲ ಎನ್ನುವ ಗ್ಯಾರಂಟಿ ನಾನು ನೀಡುತ್ತೇನೆ. ಇದೊಂದು ಪಕ್ಕಾ ಪೈಸಾ ವಸೂಲ್ ಚಿತ್ರ, ಅದರಲ್ಲಿ ಸಂಶಯನೇ ಬೇಡ ಎಂದು ಚಿತ್ರದ ನಿರ್ದೇಶಕ ದುನಿಯಾ ಸೂರಿ ಭರವಸೆಯ ಮಾತುಗಳನ್ನು ಆಡಿದ್ದಾರೆ.
ನಿಮ್ಮ ಜೀವನದ ಎರಡು ಗಂಟೆ ಅಮೂಲ್ಯ ಸಮಯವನ್ನು ನನ್ನ ಚಿತ್ರಕ್ಕೆ ನೀವು ಮೀಸಲಿಡುತ್ತೀರಿ. ನಿಮ್ಮ ಸಮಯ ಮತ್ತು ಹಣಕ್ಕೆ ನ್ಯಾಯ ಕೊಡಿಸುವುದು ನಿರ್ದೇಶಕನಾಗಿ ನನ್ನ ಕರ್ತವ್ಯ. ನಿಮಗೆ ಈ ಚಿತ್ರ ಖಂಡಿತಾ ಮನೋರಂಜನೆ ನೀಡುತ್ತದೆ. ಚಿತ್ರ ಇಷ್ಟು ಚೆನ್ನಾಗಿ ಮೂಡಿಬರಲು ಎಲ್ಲರ ಸಹಕಾರಕ್ಕೆ ನಾನು ಖುಣಿಯಾಗಿದ್ದೇನೆ ಎಂದು ಸೂರಿ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಜಂಗ್ಲಿ, ಜಾಕಿ ಚಿತ್ರದ ಛಾಯೆ ಈ ಚಿತ್ರದಲ್ಲಿ ಖಂಡಿತಾ ಇಲ್ಲ. ಅವೆರಡು ಚಿತ್ರಗಳ ಕಾನ್ಸೆಪ್ಟ್ ಬೇರೆ ಈ ಚಿತ್ರದ ಕಾನ್ಸೆಪ್ಟ್ ಬೇರೆ. ನನ್ನ ಚಿತ್ರ ಬಿಡುಗಡೆಯಾಗಿ ಜನ ಮೆಚ್ಚುಗೆ ಗಳಿಸಬೇಕು. ಆಮೇಲೆ ನನ್ನ ಚಿತ್ರದ ಬಗ್ಗೆ ನಾನು ಮಾತನಾಡಬೇಕು. ಹೀಗಾಗಿ ಎಲ್ಲೂ ಇದುವರೆಗೆ ನಾನು ಚಿತ್ರದ ಬಗ್ಗೆ ಕೊಚ್ಚಿ ಕೊಂಡಿಲ್ಲ ಎಂದು ಸೂರಿ ಟಿವಿ 9ಗೆ ನೀಡಿದ ನೇರ ಸಂದರ್ಶನದಲ್ಲಿ ಹೇಳಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಅಣ್ಣಾಬಾಂಡ್ ಚಿತ್ರಕ್ಕೆ ಇರುವಷ್ಟು ಹೈಪ್ ಇದುವರೆಗಿನ ನನ್ನ ಇತರ ಚಿತ್ರಗಳಿಗಿರಲಿಲ್ಲ. ಹಾಗಾಗಿ ಚಿತ್ರವನ್ನು ಪ್ರೇಕ್ಷಕ ಯಾವ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವ ಭಯ ಸಹಜ. ಒಟ್ಟಿನಲ್ಲಿ ಒಳ್ಳೆ ಚಿತ್ರ ನೀಡಿದ್ದೇನೆ ಎನ್ನುವ ಆತ್ಮತೃಪ್ತಿ ನನಗಿದೆ. ಇನ್ನು ಚಿತ್ರವನ್ನು ಹರಸಬೇಕಾದವರು ನೀವು ಎಂದು ನಿರ್ದೇಶಕ ಸೂರಿ ಅಣ್ಣಾಬಾಂಡ್ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ.
ಬಹು ನಿರೀಕ್ಷಿತ ಈ ಚಿತ್ರ ನಾಡದ್ದು ಕಾರ್ಮಿಕರ ದಿನಾಚರಣೆಯ ದಿನದದಂದು (ಮೇ 1) ಬಿಡುಗಡೆಯಾಗಲಿದೆ.