Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆನ್ಸಾರ್ ನಲ್ಲಿ ಗುಂಡ್ರಗೋವಿ ಪಾಸು
ಸುದರ್ಶನ್ ಕ್ರಿಯೇಷನ್ಸ್ ಲಾಂಛನದಲ್ಲಿ ಟಿ.ಎನ್. ಗೋಪಾಲಕೃಷ್ಣ ನಿರ್ಮಿಸುತ್ತಿರುವ ಗುಂಡ್ರಗೋವಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಏಪ್ರಿಲ್ ತಿಂಗಳ 3ನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಕು ಸಕಲ ಸಿದ್ಧತೆಗಳು ನಡೆಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಇಂದಾವರ, ಮತ್ತಾವರ ಗ್ರಾಮಗಳಲ್ಲಿ ಮಾತಿನ ಭಾಗ ಹಾಗೂ ರಾಜ್ಯದ ರಮಣೀಯ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ.
ಆ ದಿನಗಳು ಚಿತ್ರದಲ್ಲಿ ಸರ್ದಾರ ಪಾತ್ರದಿಂದ ಜನಮನ ಸೂರೆಗೊಂಡಿದ್ದ ಸತ್ಯ ಈ ಚಿತ್ರದ ನಾಯಕ ಪಾತ್ರ ನಿರ್ವಹಿಸಿದ್ದಾರೆ. ಹಳ್ಳಿಯಲ್ಲಿ ಪೋಲಿಯಾಗಿ ಅಲೆಯುತ್ತ ಗುಂಡ್ರಗೋವಿ ಎನಿಸಿಕೊಂಡಿದ್ದ ನಾಯಕನ ವಿಶೇಷತೆಗಳೇನು ಎಂಬುದನ್ನು ನಿರ್ದೇಶಕ ಎಂ.ಜಿ. ತಾರೇಶ್ ಬಾಬು ತುಂಬಾ ಅದ್ಭುತವಾಗಿ ನಿರೂಪಿಸಿದ್ದಾರೆ.
ಕಳೆದ ವಾರ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರವನ್ನು ಮೆಚ್ಚುಕೊಂಡು ಯಾವುದೇ ಕಟ್ ಇಲ್ಲದೆ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ. ನಿರಂಜನ ಬಾಬುರವರ ಛಾಯಾಗ್ರಹಣ, ಫೀನಿಕ್ಸ್ ರಾಜನ್ ಅವರ ಸಂಗೀತ ಸಂಯೋಜನೆ ಇರುವ ಚಿತ್ರದ ತಾರಾಬಳಗದಲ್ಲಿ ಸತ್ಯ, ನವ್ಯಶ್ರೀ, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್, ಆಶಾಲತಾ, ಶರಣ್, ಮೊದಲಾದವರಿದ್ದಾರೆ.