twitter
    For Quick Alerts
    ALLOW NOTIFICATIONS  
    For Daily Alerts

    ಲೂಸ್ ಮಾದನ ವಿರುದ್ಧ ಮುನಿರತ್ನರ ತುರ್ತು ಸಭೆ

    |
    <ul id="pagination-digg"><li class="previous"><a href="/news/29-actor-loose-mada-yogesh-producers-association-aid0172.html">« Previous</a>

    Yogesh
    ನಟ ಯೋಗಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಶೋಕ್ "ಬಿಸಿರಕ್ತದ ತರುಣ ಯೋಗೇಶ್ ಹೇಳಿಕೆ ತಪ್ಪೇನೂ ಅಲ್ಲ. ನಿರ್ಮಾಪಕರ ರಕ್ತವನ್ನು ಕಲಾವಿದರು ಹೀರುತ್ತಿಲ್ಲ ಎಂಬ ಯೋಗಿ ಹೇಳಿಕೆ ಸರಿಯಾಗಿಯೇ ಇದೆ. ಈ ಎಲ್ಲ ವಿಷಯಗಳ ಬಗ್ಗೆ ಹಿರಿಯ ನಟ ಅಂಬರೀಷ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರಲ್ಲಿ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಿದ್ದೇನೆ" ಎಂದಿದ್ದಾರೆ.

    ಅಷ್ಟಕ್ಕೂ ಈ ಮೊದಲು ಆಗಿಹೋದ ಬೆಳವಣಿಗೆ ಇಷ್ಟು. "ಕಲಾವಿದರು ನಿರ್ಮಾಪಕರ ರಕ್ತ ಹೀರುತ್ತಿದ್ದಾರೆ, ಕೋಟಿ ಕೋಟಿ ಕೇಳುತ್ತಾರೆ. ಎಲ್ಲವನ್ನೂ ನಿರ್ಮಾಪಕೇ ನೋಡಿಕೊಳ್ಳಬೇಕು. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ನಿರ್ಮಾಪಕ ಕಷ್ಟವನ್ನು ನೋಡುತ್ತಿಲ್ಲ" ಎಂಬರ್ಥದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಬಹಿರಂಗ ಹೇಳಿಕೆ ನೀಡಿದ್ದರು.

    ಅದಕ್ಕೆ ನಟ ಯೋಗೇಶ್, 'ಹಾಗೇನೂ ಇಲ್ಲ, ನಮ್ಮ ತಂದೆ ಕೂಡ ನಿರ್ಮಾಪಕರೇ. ಕಲಾವಿದನೂ ಆಗಿರುವ ನನಗೆ ನಿರ್ಮಾಪಕರ ಕಷ್ಟವೂ ಗೊತ್ತಿದೆ. ನಾವು ಎಲ್ಲವನ್ನೂ ನಿರ್ಮಾಪಕರ ತಲೆಮೇಲೆ ಹೊರಿಸುವುದಿಲ್ಲ. ಕಲಾವಿದರ ಮೇಲೆ ಮುನಿರತ್ನ ಮಾಡಿರುವ ಆಪಾದನೆಯಲ್ಲಿ ಸತ್ಯಾಂಶವಿಲ್ಲ" ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದರು.

    ಇದೀಗ ನಟ ಯೋಗೇಶ್ ಹೇಳಿಕೆ ವಿರುದ್ಧ ತಿರುಗಿ ಬಿದ್ದಿರುವ ನಿರ್ಮಾಪಕ ಸಂಘ, ಯೋಗಿ ಮೇಲೆ ಕ್ರಮ ಕೈಗೊಳ್ಳುವ ಕುರಿತು ಯೋಚಿಸಿ ಕರೆದಿರುವ ಇಂದಿನ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ. ನಾಲ್ಕು ಗಂಟೆ ನಂತರ ಮುಂದಿನ ಬೆಳವಣಿಗೆ ತಿಳಿದುಬರಲಿದೆ. (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/29-actor-loose-mada-yogesh-producers-association-aid0172.html">« Previous</a>

    English summary
    Today, there is a meeting in Producers Association today (March 29 2012) on actor Loose Mada Yogesh sentence against producers association president Munirthna. &#13; &#13;
    Thursday, March 29, 2012, 14:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X