Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಭಿಮನ್ಯು' ಹಿಂದಿ ಚಿತ್ರದಲ್ಲಿ ಪೂಜಾಗಾಂಧಿ!
'ಮುಂಗಾರು ಮಳೆ' ಚಿತ್ರ ಹಿಂದಿ ಭಾಷೆಗೆ ರೀಮೇಕ್ ಆಗಲಿರುವ ಸುದ್ದಿ ಜಗಜ್ಜಾಹೀರಾಗಿದೆ. ಈಗ ಆ ಚಿತ್ರದ ನಾಯಕಿ ಪೂಜಾಗಾಂಧಿ ಅವರನ್ನು ಹಿಂದಿಯಲ್ಲಿ ನಟಿಸುವ ಅವಕಾಶ ಅರಸಿಕೊಂಡು ಬಂದಿದೆ. ಪೂಜಾ ನಟಿಸಲಿರುವ ಹಿಂದಿ ಚಿತ್ರದ ಹೆಸರು 'ಅಭಿಮನ್ಯು'. ಈ ಚಿತ್ರವನ್ನು 'ಮೈ ಬ್ರದರ್ ನಿಖಿಲ್' ಖ್ಯಾತಿಯ ಓನಿರ್ ನಿರ್ದೇಶಿಸಲಿದ್ದಾರೆ. ಮಕ್ಕಳ ಶೋಷಣೆ ಕುರಿತ ಕಥಾ ಹಂದರವನ್ನು ಅಭಿಮನ್ಯು ಚಿತ್ರ ಒಳಗೊಂಡಿದೆಯಂತೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೂಜಾಗಾಂಧಿ, ಚಿತ್ರದಲ್ಲಿ ನನ್ನುದು ಸಣ್ಣ ಪಾತ್ರ. ಪಾತ್ರ ಚಿಕ್ಕದಾದರೂ ಗಮನಾರ್ಹವಾಗಿದೆ. ಚಿತ್ರದ ಬಹುತೇಕ ಭಾಗವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತದೆ. ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಈ ಕಾರಣಕ್ಕಾಗಿಯೇ ನಾನು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಎನ್ನುತ್ತಾರೆ.
ಅಂದಹಾಗೆ ಇದೊಂದು ಲಘು ಚಿತ್ರವಾಗಿದೆ. ಇದುವರೆಗೂ ಮಕ್ಕಳ ಶೋಷಣೆ ಕುರಿತು ಬಾಲಿವುಡ್ ನಲ್ಲಿ ಐದು ಲಘು ಚಿತ್ರಗಳು ತೆರೆಕಂಡಿವೆ. ಅಭಿಮನ್ಯು ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಸಂಜಯ್ ಸೂರಿ, ರಾಧಿಕಾ ಆಪ್ಟೆ, ಶೆರ್ನಾಜ್ ಪಟೇಲ್ ಮತ್ತು ರಾಹುಲ್ ಬೋಸ್ ಚಿತ್ರದಲ್ಲಿನ ಇತರೆ ನಟರು.
(ದಟ್ಸ್ ಕನ್ನಡ ಚಿತ್ರವಾರ್ತೆ)