Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಭಿಮನ್ಯು' ಹಿಂದಿ ಚಿತ್ರದಲ್ಲಿ ಪೂಜಾಗಾಂಧಿ!
'ಮುಂಗಾರು ಮಳೆ' ಚಿತ್ರ ಹಿಂದಿ ಭಾಷೆಗೆ ರೀಮೇಕ್ ಆಗಲಿರುವ ಸುದ್ದಿ ಜಗಜ್ಜಾಹೀರಾಗಿದೆ. ಈಗ ಆ ಚಿತ್ರದ ನಾಯಕಿ ಪೂಜಾಗಾಂಧಿ ಅವರನ್ನು ಹಿಂದಿಯಲ್ಲಿ ನಟಿಸುವ ಅವಕಾಶ ಅರಸಿಕೊಂಡು ಬಂದಿದೆ. ಪೂಜಾ ನಟಿಸಲಿರುವ ಹಿಂದಿ ಚಿತ್ರದ ಹೆಸರು 'ಅಭಿಮನ್ಯು'. ಈ ಚಿತ್ರವನ್ನು 'ಮೈ ಬ್ರದರ್ ನಿಖಿಲ್' ಖ್ಯಾತಿಯ ಓನಿರ್ ನಿರ್ದೇಶಿಸಲಿದ್ದಾರೆ. ಮಕ್ಕಳ ಶೋಷಣೆ ಕುರಿತ ಕಥಾ ಹಂದರವನ್ನು ಅಭಿಮನ್ಯು ಚಿತ್ರ ಒಳಗೊಂಡಿದೆಯಂತೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೂಜಾಗಾಂಧಿ, ಚಿತ್ರದಲ್ಲಿ ನನ್ನುದು ಸಣ್ಣ ಪಾತ್ರ. ಪಾತ್ರ ಚಿಕ್ಕದಾದರೂ ಗಮನಾರ್ಹವಾಗಿದೆ. ಚಿತ್ರದ ಬಹುತೇಕ ಭಾಗವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತದೆ. ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಈ ಕಾರಣಕ್ಕಾಗಿಯೇ ನಾನು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಎನ್ನುತ್ತಾರೆ.
ಅಂದಹಾಗೆ ಇದೊಂದು ಲಘು ಚಿತ್ರವಾಗಿದೆ. ಇದುವರೆಗೂ ಮಕ್ಕಳ ಶೋಷಣೆ ಕುರಿತು ಬಾಲಿವುಡ್ ನಲ್ಲಿ ಐದು ಲಘು ಚಿತ್ರಗಳು ತೆರೆಕಂಡಿವೆ. ಅಭಿಮನ್ಯು ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಸಂಜಯ್ ಸೂರಿ, ರಾಧಿಕಾ ಆಪ್ಟೆ, ಶೆರ್ನಾಜ್ ಪಟೇಲ್ ಮತ್ತು ರಾಹುಲ್ ಬೋಸ್ ಚಿತ್ರದಲ್ಲಿನ ಇತರೆ ನಟರು.
(ದಟ್ಸ್ ಕನ್ನಡ ಚಿತ್ರವಾರ್ತೆ)