Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಿಪ್ಪಾರಹಳ್ಳಿ ತರ್ಲೆಗಳು ಬರ್ತಿದ್ದಾರೆ ಹುಷಾರು!
ಬರೋಬ್ಬರಿ ಎರಡುವರೆ ವರ್ಷಗಳ ನಂತರ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಬೆಳಕಿಗೆ ಬರುತ್ತಿದ್ದಾರೆ. ಅರ್ಥಾತ್ ಅವರ ನಿರ್ದೇಶನದ ಚಿತ್ರ 'ತಿಪ್ಪಾರಹಳ್ಳಿ ತರ್ಲೆಗಳು' ಚಿತ್ರ ಈ ವಾರ ತೆರೆಕಾಣುತ್ತಿದೆ. ಎಸ್ ನಾರಾಯಣ್, ಓಂ ಪ್ರಕಾಶ್ ರಾವ್, ಕೋಮಲ್ ಕುಮಾರ್ ಮುಖ್ಯಪಾತ್ರದಲ್ಲಿರುವ ಚಿತ್ರ.ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ.
ತಿಪ್ಪಾರಹಳ್ಳಿ ತರ್ಲೆಗಳು ಚಿತ್ರದ ಜೊತೆಗೆ ಸಿಂಗ್ ಬಾಬು ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ರತ್ನಜ ನಿರ್ದೇಶನದ ಪ್ರೇಮಿಸಂ ಸಹ ಈ ವಾರ ತೆರೆಗೆ ಅಪ್ಪ್ಪಳಿಸುತ್ತಿದೆ. ಒಟ್ಟಿನಲ್ಲಿ ಗುರು ಶಿಷ್ಯರ ಚಿತ್ರಗಳು ಬಾಕ್ಸಾಫೀಸಲ್ಲಿ ಸೆಣೆಸಲಿವೆ. ಒಂದು ಪ್ರೇಮಕತೆಯಾದರೆ ಮತ್ತೊಂದು ಹಾಸ್ಯಪ್ರಧಾನ ಚಿತ್ರ.
ಅಗಸ, ದರ್ಜಿ ಹಾಗೂ ಪೂಜಾರಿ ಪಾತ್ರಗಳ ಮೂಲಕ ಕಚಗುಳಿಯಿಡಲಿದೆ 'ತಿಪ್ಪಾರಹಳ್ಳಿ ತರ್ಲೆಗಳು'. 1981ರಲ್ಲಿ ತೆರೆಕಂಡ 'ಅಂತ' ಚಿತ್ರದ 'ಕನ್ವರ್ ಲಾಲ್' ಪಾತ್ರ ಮತ್ತೆ ತಿಪ್ಪಾರಹಳ್ಳಿ ತರ್ಲೆಗಳಲ್ಲಿ ಜೀವ ಪಡೆದುಕೊಳ್ಳಲಿದೆ. ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು ಮತ್ತು ಕತ್ತೆಗಳು ಸಾರ್ ಕತ್ತೆಗಳು ಚಿತ್ರಗಳ ಮಾದರಿಯ ಹಾಸ್ಯ ಪ್ರೇಕ್ಷಕರಿಗೆ ಸಿಗಲಿದೆ ಎನ್ನುತ್ತಾರೆ ಸಿಂಗ್ ಬಾಬು.
ಸಿಂಗ್ ಬಾಬು ಚಿತ್ರಗಳಲ್ಲಿ ಕತೆ ತುಂಬ ಸರಳವಾಗಿರುತ್ತದೆ. ಅರ್ಥಗರ್ಭಿತವಾಗಿ ಅದ್ಭುತ ಹಾಸ್ಯವನ್ನು ಅವರ ಚಿತ್ರಗಳಿಂದ ಪ್ರೇಕ್ಷಕರು ನಿರೀಕ್ಷಿಸಬಹುದು ಎನ್ನುತ್ತಾರೆ ಸಿಂಗ್ ಬಾಬು ಕ್ಯಾಂಪ್ ನಲ್ಲಿ ಪಳಗಿದ ಮತ್ತೊಬ್ಬ ನಿರ್ದೇಶಕ ಹಾಗೂ ನಟ ಎಸ್ ನಾರಾಯಣ್. ಒಟ್ಟಿನಲ್ಲಿ ಸುಂದರವಾದ, ರುಚಿಕಟ್ಟಾದ ಉಪ್ಪಿನಕಾಯಿ ತರಹ ಚಿತ್ರ ಇದೆ ಎಂಬುದು ಕೋಮಲ್ ಕುಮಾರ್ ಅವರ ಅಭಿಪ್ರಾಯ.