Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡಿದ ಮರಕ್ಕೆ ದಂಡವಾಗಿ 10ಸಾವಿರ ರು. ಕಕ್ಕಿದ ಸಿಹಿಕಹಿ ಚಂದ್ರು
ಪಾ.ಪ.ಪಾಂಡು ಮೂಲಕ ಸಾಕಷ್ಟು ದುಡ್ಡು ಮತ್ತು ಸದ್ದು ಮಾಡಿರುವ ಹಿರಿ- ಕಿರಿ ತೆರೆಯ ನಟ/ನಿರ್ದೇಶಕ ಸಿಹಿಕಹಿ ಚಂದ್ರು ಮಹಾನಗರ ಪಾಲಿಕೆಗೆ 10 ಸಾವಿರ ರುಪಾಯಿ ದಂಡ ಕಟ್ಟಿದ ಪ್ರಸಂಗವಿದು..
ನಾಲ್ಕು ದಿನಗಳ ಕೆಳಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಹಳೆಯ ಕೇಂದ್ರ ಕಾರಾಗೃಹದಲ್ಲಿ (ಕೇಂದ್ರ ಕಾರಾಗೃಹ ಈಗ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಗೊಂಡಿದೆ) ‘ಚಿರಸ್ಮರಣೆ’ ಎಂಬ ಧಾರಾವಾಹಿಯ ಶೂಟಿಂಗ್ ಮಾಡುತ್ತಿದ್ದರು. ಒಂದು ಸಣ್ಣ ಮರ ಅಡ್ಡ ಆಯಿತೆಂದು ಅದನ್ನು ಕಡಿಸಿ ಹಾಕಿದರು. ಮರ ಕಡಿಯುವುದನ್ನು ಬೆಂಗಳೂರಲ್ಲಿ ನಿಷೇಧಿಸಿರುವುದರಿಂದ ಇದು ದಂಡ ಕಟ್ಟಿಸಿಕೊಳ್ಳುವಂಥ ಕೃತ್ಯವಾಯಿತು. ಸಿಹಿ ಕಹಿ ಚಂದ್ರುಗೆ ಪಾಲಿಕೆಯವರು 10 ಸಾವಿರ ರುಪಾಯಿ ದಂಡ ಹಾಕಿದರು.
ಧಾರಾವಾಹಿ ಶೂಟಿಂಗಿಗೆಂದು ಮೊದಲೇ ಕಟ್ಟಿಸಿಕೊಂಡಿದ್ದ 5 ಸಾವಿರ ರುಪಾಯಿ ಠೇವಣಿ ಮುಟ್ಟುಗೋಲು ಹಾಕಿಕೊಂಡು ಇನ್ನೂ 5 ಸಾವಿರ ರುಪಾಯಿಯನ್ನು ಚಂದ್ರು ಅವರಿಂದ ಪಾಲಿಕೆ ವಸೂಲಿ ಮಾಡಿತು.
ಪಾಲಿಕೆಯ ಉಪ ಆಯುಕ್ತ ಆರ್.ರೆ.ನಿರಂಜನ್ ಸುದ್ದಿಗಾರರಿಗೆ ಗುರುವಾರ (ಆ.28) ಈ ವಿಷಯ ತಿಳಿಸಿದರು. ಇಂಥಾ ಘಟನೆ ಮರುಕಳಿಸಕೂಡದೆಂಬ ಕಾರಣಕ್ಕೆ ಹಳೆಯ ಕೇಂದ್ರ ಕಾರಾಗೃಹವನ್ನು ಇನ್ನು ಮುಂದೆ ಯಾವ ಚಿತ್ರೀಕರಣಕ್ಕೂ ಕೊಡದಿರಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ.
ಹಳೆಯ ಕೇಂದ್ರ ಕಾರಾಗೃಹದಲ್ಲಿ ಉದ್ಯಾನವನ ನಿರ್ಮಿಸಲು ರಾಜ್ಯ ಸರ್ಕಾರ ಜಾಗವನ್ನು ಮಹಾನಗರ ಪಾಲಿಕೆಗೆ ಗುತ್ತಿಗೆ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್