Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಂಕರ್ : ಆಗ ಉಲ್ಟಾಪಲ್ಟಾ ಈಗ ಜೂಟಾಟ
ಉಲ್ಟಾಪಲ್ಟಾ ಖ್ಯಾತಿಯ ನಿರ್ದೇಶಕ ಹಾಗೂ ಪತ್ರಕರ್ತ ಎನ್.ಎಸ್. ಶಂಕರ್ ರಾಂಗ್ನಂಬರ್ ಮೂಲಕ ನಾಪತ್ತೆಯಾಗಿದ್ದರು. ್ಫಅವರೀಗ ಜೂಟ್ ಎನ್ನುತ್ತಿದ್ದಾರೆ!
ಅಡೆತಡೆಯಿಲ್ಲದ ನಾನ್ಸ್ಟಾಪ್ ಹಾಸ್ಯ ನೀಡುವುದು ಶಂಕರ್ಗೆ ಸಲೀಸೆನ್ನುವುದು ಉಲ್ಟಾಪಲ್ಟಾದ ಮೂಲಕ ಸಾಬೀತಾಗಿತ್ತು . ವಿಜಯ್ಕುಮಾರ್ ನಿರ್ಮಾಪಕರಾಗಿರುವ ಜೂಟಾಟ ಚಿತ್ರದಲ್ಲೂ ಅಪ್ಪಟ ಹಾಸ್ಯದ ಸರಣಿಯನ್ನು ಮುಂದುವರೆಸುವ ಭರವಸೆಯನ್ನು ಶಂಕರ್ ನೀಡಿದ್ದಾರೆ. ಜೂಟಾಟ ಶಂಕರ್ಗೆ ಮೂರನೇ ಚಿತ್ರ. ಎರಡನೇ ಚಿತ್ರ ರಾಂಗ್ನಂಬರ್ ಗೆಲ್ಲದ ಕಾರಣ ಮರಳಿ ಹಾಸ್ಯದ ಟ್ರ್ಯಾಕ್ಗೆ ಶಂಕರ್ ಹೊರಳಿದ್ದಾರೆ.
ಕಾರ್ ಕಾರ್ ಹುಡುಗ ಧ್ಯಾನ್, ರೀಚಾ ಪಲ್ಲಟ್ ಮತ್ತು ಆಕಾಶ್ ಜೂಟಾಟದಲ್ಲಿದ್ದಾರೆ. ಇಪ್ಪತ್ತಕ್ಕೂ ಅಧಿಕ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಒಂದು ವಿಶೇಷ. ಜೂಟಾಟ ಹೊಸತೇನಲ್ಲ. ಮಳಯಾಳಂನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ತೆರೆಕಂಡಿದ್ದ ಕುಚಿಕುರು ಮುಕುತಿ ಚಿತ್ರವನ್ನು ರಿಮೇಕ್ ಮಾಡಲಾಗುತ್ತಿದೆ. ಇದು ಹಿಂದಿಯಲ್ಲಿ ಹಂಗಾಮ ಹೆಸರಿಂದ ತೆರೆಗೆ ಬಂದಿತ್ತು. ಮಕ್ಕಳು ಸೇರಿದಂತೆ ಮನೆಮಂದಿಗೆ ಜೂಟಾಟ ಮುದ ನೀಡಲಿದೆ. 35 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸುವ ಉದ್ದೇಶ ಶಂಕರ್ ಅವರದು.
ಜೂಟಾಟ ಮೂಲಕ ನನ್ನ ಇಪ್ಪತ್ತು ವರ್ಷಗಳ ಕನಸು ಈಗ ನನಸಾಗುತ್ತಿದೆ. ಇದಕ್ಕೆ ಹೆಗಲು ಕೊಟ್ಟ ಗೆಳೆಯ ಶಂಕರ್, ಸುಧೀರ್, ಹನುಮಂತರಾಜು ಮತ್ತಿತರರ ಸಹಕಾರವನ್ನು ಮರೆಯಲಾಗದು ಎನ್ನುತ್ತಾರೆ ನಿರ್ಮಾಪಕ ವಿಜಯಕುಮಾರ್.
ಜೂಟಾಟ ಎಲ್ಲರಿಗೂ ಖುಷಿ ಕೊಡಲಿ- ಮುಖ್ಯವಾಗಿ ನಿರ್ಮಾಪಕ ನಿರ್ದೇಶಕರಿಗೆ.