ನಾಳೆ (ಶುಕ್ರವಾರ) ಮೂರು ಕನ್ನಡ ಚಿತ್ರಗಳ ಬಿಡುಗಡೆ
ನಾಳೆ, ಆಗಸ್ಟ್ 2 ರಂದು ಕನ್ನಡದಲ್ಲಿ ಮೂರು ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. 'ಬೆಕ್ಕಿಗೊಂದು ಮೂಗುತಿ', 'ಭಾನು ಮತ್ತು ಭೂಮಿ' ಹಾಗೂ 'ವಜ್ರಮುಖಿ' ಚಿತ್ರಗಳು ಈ ವಾರ ತೆರೆಗೆ ಬರುತ್ತಿವೆ.
'ಭಾನು ವೆಡ್ಸ್ ಭೂಮಿ' ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ಸೂರ್ಯಪ್ರಭ್, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ಹಾಗೂ ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸುತ್ತಿದ್ದಾರೆ.
'ಬೆಕ್ಕಿಕೊಂದು ಮೂಗುತಿ' ಮಾಯಾ ಮೂವೀಸ್ ಮೇಕರ್ಸ್ ಲಾಂಛನದಲ್ಲಿ, ಜಿ.ಕೆ. ಮಾಧುರಿ ಉಮೇಶ್ ನಿರ್ಮಿಸಿ, ಆಸ್ಲಿ ಚಾಕೋ ನಿರ್ದೇಶಿಸಿರುವ ಚಿತ್ರ. ತಾರಾಗಣದಲ್ಲಿ ಸುಷ್ಮ, ರಮೇಶ್ ಭಟ್, ಬೆಂಗಳೂರು ನಾಗೇಶ್, ಮುನಿ, ವಿವಿನ್, ಉಮೇಶ್ ಮುಂತಾದವರಿದ್ದರೆ.

'ವಜ್ರಮುಖಿ' ಶ್ರೀ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣ ಆಗಿದೆ. ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರವಿಕಿರಣ್, ನೇಹಾ, ರಾಘವೇಂದ್ರ ರೈ, ಶಶಿಕುಮಾರ್, ಅನಿಲ್ ಕುಮಾರ್, ಸ್ವಪ್ನಶ್ರೀ, ಪ್ರೇಕ್ಷಾ ಮುಂತಾದವರು ನಟಿಸಿದ್ದಾರೆ.


Click it and Unblock the Notifications











