Don't Miss!
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ನಿರ್ದೇಶನಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ
ನಟ, ನಿರ್ಮಾಪಕ ಕಮ್ ರಾಜಕಾರಣಿ ಜಗ್ಗೇಶ್ ಈಗಾಗಲೆ ಗಾಯಕರಾಗಿ ಒಂದೆರಡು ಹಾಡುಗಳನ್ನೂ ಹಾಡಿ ಗುರುತಿಸಿಕೊಂಡದ್ದು ಉಂಟು. 'ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ', 'ಭಂಡ ನನ್ನ ಗಂಡ' (ಅತಿಂಥ ಗಂಡು ನಾನಲ್ಲ...) ಚಿತ್ರಗಳಲ್ಲಿ ಜಗ್ಗೇಶ್ ಹಾಡಿ ಕುಣಿದಿದ್ದರು. ಆದರೆ ಅವರಿಗೆ ಇದುವರೆಗೂ ಆಕ್ಷನ್ ಕಟ್ ಹೇಳುವ ಸೌಭಾಗ್ಯ ಸಿಕ್ಕಿರಲಿಲ್ಲ.
ಈಗವರು ತಮ್ಮ ಪುತ್ರ ಗುರುರಾಜ್ಗೆ ಮೊಟ್ಟಮೊದಲ ಬಾರಿಗೆ ಲೈಟ್ಸ್ ಕ್ಯಾಮೆರಾ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಈ ಚಿತ್ರವನ್ನು ಗುರುರಾಜ್ ಬ್ಯಾನರ್ಸ್ ಲಾಂಛನದಲ್ಲಿ ಜಗ್ಗೇಶ್ ನಿರ್ಮಿಸುತ್ತಿದ್ದು ಇತ್ತೀಚೆಗಷ್ಟೇ ಪೂಜೆ, ಹೋಮವನ್ನೂ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದರು. ಇದೀಗ ರಾಯರ ಅನುಗ್ರಹಕ್ಕಾಗಿ ಜಗ್ಗೇಶ್ ಮಂತ್ರಾಲಯಕ್ಕೂ ಪಾದ ಬೆಳೆಸಿದ್ದಾರೆ.
ಗುರುರಾಜ್ ಅಭಿನಯದ 'ಗಿಲ್ಲಿ' ಹಾಗೂ 'ಸಂಕ್ರಾಂತಿ' ಚಿತ್ರಗಳು (ಎರಡೂ ರೀಮೇಕ್) ಬಾಕ್ಸಾಫೀಸಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ಹೇಗಾದರೂ ಮಾಡಿ ತಮ್ಮ ಮಗನಿಗೆ ಒಂದು ಬ್ರೇಕ್ ಕೊಡಬೇಕು ಎಂದು ಜಗ್ಗೇಶ್ ತೀರ್ಮಾನಿಸಿದಂತಿದೆ. ಇದಕ್ಕಾಗಿ ಮಗನನ್ನು ಬ್ಯಾಂಕಾಕ್ಗೆ ಕಳುಹಿಸಿ ಕಿಕ್ ಬಾಕ್ಸಿಂಗ್ನಲ್ಲೂ ತರಬೇತಿ ಕೊಡಿಸಿದ್ದಾರೆ. ಚಿತ್ರದ ವಿವರಗಳು ಇನ್ನಷ್ಟೇ ಹೊರಬೀಳಬೇಕು. (ಏಜೆನ್ಸೀಸ್)