Don't Miss!
- News Heavy Rain: ಸಕ್ಕರೆ ನಾಡಿನಲ್ಲಿ ವರ್ಷದ ಮೊದಲ ಮಳೆ: ಧರೆಗುರುಳಿದ ಮರ, ಕಮಾನುಗಳು
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Sports PBKS vs MI IPL 2024: ಸೂರ್ಯಕುಮಾರ್ ಶೈನಿಂಗ್; ಪಂಜಾಬ್ಗೆ ಸವಾಲಿನ ಗುರಿ ನೀಡಿದ ಮುಂಬೈ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾಬಾಂಡ್ ಆರ್ಭಟಕ್ಕೆ ಗೋವಿಂದಾಯ ನಮಃ ಬಲಿ?
ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಅನ್ಯಾಯದ ಕೂಗು ಕೇಳಿಬರುತ್ತಿದೆ. ದೊಡ್ಡ ಬ್ಯಾನರ್ ಚಿತ್ರವೊಂದು ತೆರೆಗೆ ಬರುವಾಗ ಅದೇ ದಿನ ಬರಲಿರುವ ಚಿಕ್ಕ ಬ್ಯಾನರ್ ಚಿತ್ರಗಳನ್ನು ಬರದಂತೆ ಮಾಡುವುದಲ್ಲದೇ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಿತ್ರದ ಚಿತ್ರಮಂದಿರವನ್ನೂ ನುಂಗಿ ನೀರು ಕುಡಿಯುವುದು ಕನ್ನಡ ಚಿತ್ರರಂಗದ ದುರಾದೃಷ್ಟ ಎಂದೇ ಬಿಂಬಿಸಲಾಗುತ್ತಿದೆ. ಈಗ ಅಣ್ಣಾಬಾಂಡ್ ಚಿತ್ರದಿಂದ ಗೋವಿಂದಾಯ ನಮಃ ಚಿತ್ರಕ್ಕೆ ಅದೇ ದುರ್ಗತಿ ಒದಗಿದೆ ಎನ್ನಲಾಗಿದೆ.
ನಾಳೆ (ಮೇ 1, 2012) ಬಿಡುಗಡೆಯಾಗಲಿರುವ ಅಣ್ಣಾಬಾಂಡ್ ಚಿತ್ರಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಚಿತ್ರಮಂದಿರಗಳ ಮಾಲೀಕರು ಚೆನ್ನಾಗಿ ಪ್ರದರ್ಶನವಾಗುತ್ತಿದ್ದ ಕೋಮಲ್ ಅಭಿನಯದ 'ಗೋವಿಂದಾಯ ನಮಃ' ಚಿತ್ರವನ್ನು ಕಿತ್ತು ಹಾಕಲಿದ್ದಾರೆ. ಇದಕ್ಕೆ ಗೋವಿಂದಾಯ ನಮಃ ಚಿತ್ರದ ನಿರ್ಮಾಪಕ ಸುರೇಶ್ ಬಾಬು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತೀವ್ರ ಪ್ರತಿಭಟನೆ ಮಾಡಲಾಗುವುದೆಂದೂ ಹೇಳಿದ್ದಾರೆ.
"ಈ ಬೆಳವಣಿಗೆ ಕೆಎಫ್ ಸಿಸಿ ನಿಯಮಕ್ಕೆ ವಿರುದ್ಧವಾಗಿದೆ. ಥಿಯೇಟರ್ ಬಾಡಿಗೆ ಹಾಗೂ ನಿರ್ಮಾಪಕರ ಷೇರುಗಳು ಬರುತ್ತಿರುವಾಗ ಚಿತ್ರವನ್ನು ಕಿತ್ತುಹಾಕುವಂತಿಲ್ಲ. ನಮ್ಮ ಗೋವಿಂದಾಯ ನಮಃ ಚಿತ್ರದಿಂದ ನನಗೆ 4 ಲಕ್ಷ ಷೇರುಗಳು ಬರುತ್ತಿವೆ. ಹೀಗಿರುವಾಗ ನಮಗೆ ಅನ್ಯಾಯವಾಗಿದೆ. ನ್ಯಾಯ ಹೇಳಬೇಕಾಗಿರುವವರಿಂದಲೇ ಅನ್ಯಾಯವಾದರೆ ಹೇಗೆ?" ಎಂದು ಸುರೇಶ್ ಬಾಬು ಅವಲತ್ತುಕೊಂಡಿದ್ದಾರೆ. ಮುಂದಿನ ಪುಟ ನೋಡಿ...