Don't Miss!
- News "ಅಲ್ಲಾ ಹೋ ಅಕ್ಬರ್" ಕೂಗಬೇಕು ಎಂದು ಮುಸ್ಲಿಂ ಗೂಂಡಾಗಳಿಂದ ಧಮ್ಕಿ ; ನಾವು ಪಾಕಿಸ್ತಾನದಲ್ಲಿ ಇದ್ದೇವಾ - ಆರ್.ಅಶೋಕ್
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗ್ರೋವರ್ ಕೊಲೆ ಪ್ರಕರಣ: ಮೈಸೂರು ನಟಿ ಮಾರಿಯಾ ದೋಷಿ
ಗ್ರೋವರ್ ಕೊಲೆಗೆ ಕಾರಣವಾದ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದಸಂಬಂಧ ಭಾರತೀಯ ದಂಡ ಸಂಹಿತೆ 201ರಡಿ ಮಾರಿಯಾರನ್ನು ಹಾಗೂ ಕೊಲೆಗೆ ಸಹಕರಿಸಿದ ಕಾರಣ ಸೆಕ್ಷನ್ 304 (ಭಾಗ 1)ರಡಿ ದೋಷಿ ಎಂದು ನಿರ್ಧರಿಸಿದೆ. ಆದರೆ ಜೆರೋಮ್ ಕೊಲೆ ಕಾರಣ ಏನು ಎಂಬುದನ್ನು ಸಾಬೀತುಪಡಿದಲು ಪ್ರಾಸಿಕ್ಯೂಷನ್ ವಿಫಲವಾಯಿತು.
"ಕೊಲೆಗೆ ಕಾರಣ ಏನು ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಆಗಲಿಲ್ಲ" ಎಂದು ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಡಬ್ಲ್ಯು ಚಂಡ್ವನಿ ಹೇಳಿದರು. ಶಿಕ್ಷಯ ಪ್ರಮಾಣವನ್ನು ಶುಕ್ರವಾರ (ಆ.1) ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದರೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಕೋರ್ಟ್ ತೀರ್ಪಿನ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್ ವಿ ಕಿಣಿ ಹಾಗೂ ಗ್ರೋವರ್ ಸಂಬಂಧಿಗಳು ತೀರ್ಪನ್ನು ಪ್ರಶ್ನಿಸಲು ನಿರ್ಧರಿಸಿದ್ದಾರೆ. ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂಬುದು ಅವರ ವಾದ.
"ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಾಗಿದೆ. ಹೆಚ್ಚು ಎಂದರೆ ಅವರಿಗೆ ಮೂರು ವರ್ಷ ಕಾರಾಗಾರ ಶಿಕ್ಷೆ ವಿಧಿಸಬಹುದು. ತೀರ್ಪಿನ ವಿರುದ್ಧ ನಾವು ಹೆಚ್ಚುವರಿ ನ್ಯಾಯಾಲಯದ ಮೊರೆಹೋಗುತ್ತೇವೆ. ಶಿಕ್ಷೆಯ ಪ್ರಮಾಣ ಶುಕ್ರವಾರ ಪ್ರಕಟವಾಗಲಿದೆ" ಎಂದಿದ್ದಾರೆ ಕಿಣಿ.
"ನ್ಯಾಯಾಂಗದ ಮೇಲೆ ನಾನು ನಂಬಿಕೆ ಕಳೆದುಕೊಂಡಿದ್ದೇನೆ. ತೀರಾ ನಿರಾಶಾದಾಯ ತೀರ್ಪು ನೀಡಿದ್ದಾರೆ. ಮಾರಿಯಾ ಅವನನ್ನು ಕೊಲೆ ಮಾಡಿಲ್ಲ ಎಂದಾದರೆ ನನ್ನ ಮಗ ಎಲ್ಲಿ?" ಎಂದು ಹತಾಶರಾಗಿ ನುಡಿದ್ದಾರೆ ಗ್ರೋವರ್ ಅವರ ತಂದೆ ಅಮರನಾಥ್ ಗ್ರೋವರ್.
ಏನಿದು ಗ್ರೋವರ್ ಕೊಲೆ ಪ್ರಕರಣ?: 2008ರಲ್ಲಿ ಮಾರಿಯಾ ಸುಸೈರಾಜ್ ತಂಗಿದ್ದ ಮುಂಬೈ ಅಪಾರ್ಟ್ಮೆಂಟ್ನಲ್ಲಿ ತನ್ನ ಭಾವಿ ಪತಿ ಜೆರೋಮ್ ಜೊತೆ ಸೇರಿ ನೀರಜ್ ಗ್ರೋವರ್ನನ್ನು ಹತ್ಯೆ ಮಾಡಿದ್ದಳು. ಬಳಿಕ ಶವವನ್ನು ಬಿಸಾಡಿ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿದ್ದಳು.
ಪೊಲೀಸರ ಪ್ರಯತ್ನದಿಂದ ಈ ಕೊಲೆ ಪ್ರಕರಣ ಬಯಲಾಗಿತ್ತು. ಬಳಿಕ ಮಾರಿಯಾ ಹಾಗೂ ಜೆರೋಮ್ನನ್ನು ಬಂಧಿಸಲಾಗಿತ್ತು. ತ್ರಿಕೋನ ಪ್ರೇಮವೆ ಕೊಲೆಗೆ ಕಾರಣ ಎನ್ನಲಾಗಿದೆ. ಗ್ರೋವರ್ ಮೃತದೇಹವನ್ನು ಚಾಕುವಿನಿಂದ ಕತ್ತರಿಸಿ ಚಿದ್ರಚಿದ್ರ ಮಾಡಲಾಗಿತ್ತು. (ದಟ್ಸ್ಕನ್ನಡ ಸಿನಿವಾರ್ತೆ)