Don't Miss!
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿಕಾರಿಯಾಗಿ ಕನ್ನಡಕ್ಕೆ ದಯಮಾಡಿದ ಮಮ್ಮೂಟಿ
ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟ್ಟಿ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಅಭಯಸಿಂಹ ನಿರ್ದೇಶನದ ಅವರೇ ಕಥೆ, ಚಿತ್ರಕಥೆ ಹಣೆದಿರುವ 'ಶಿಕಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಮ್ಮೂಟಿ ಎಂಟ್ರಿ ನೀಡಲಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು ಶಿಕಾರಿ ಹೊಂದಿದೆಯಂತೆ. ಕಮರ್ಷಿಯಲ್ ಚಿತ್ರದಲ್ಲಿ ಏನೇನು ಇರಬೇಕೋ ಅವೆಲ್ಲವೂ ಇವೆ ಎನ್ನುತ್ತಾರೆ ನಿರ್ಮಾಪಕ ಎನ್.ಆರ್.ಶೆಟ್ಟಿ.
ಕಥಾವಸ್ತು ಇಷ್ಟವಾದರೆ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳದ ಆಸಾಮಿ ಈ ಮಮ್ಮೂಟ್ಟಿ. ಕನ್ನಡ ಚಿತ್ರರಂಗದಲ್ಲಿ ನನಗೆ ಅಷ್ಟಾಗಿ ಬೇಡಿಕೆ ಇಲ್ಲ ಅಂದು ಗೊತ್ತು. ಆದ್ದರಿಂದ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕನ್ನಡದ ಮಾರುಕಟ್ಟೆಗೆ ತಕ್ಕಂತೆ ನನಗೆಷ್ಟು ಸಂಭಾವನೆ ಕೊಡಬಹುದು ಎಂಬುದನ್ನು ನೀವೇ ನಿರ್ಧರಿಸಿ ಎಂದು ಮಮ್ಮುಟ್ಟಿ ಅವರೇ ಹೇಳಿರುವುದಾಗಿ ಶಿಕಾರಿ ಚಿತ್ರದ ನಿರ್ಮಾಪಕ ಎನ್.ಆರ್. ಶೆಟ್ಟಿ ಸಿನಿ ಪತ್ರಕರ್ತರಿಗೆ ತಿಳಿಸಿದರು. ಚಿತ್ರಕ್ಕೆ ಅನ್ ಮೋಲ್ ಭಾವೆ ಸಂಗೀತ. ವಿಕ್ರಂ ಶ್ರೀವಾತ್ಸವ ಛಾಯಾಗ್ರಹಣವಿದೆ. ಸುಚಿತ್ರಾ ಸಾಥೆ ಸಂಕಲನ. ಚಿತ್ರೀಕರಣ ಕರ್ನಾಟಕದಲ್ಲೇ ನಡೆಯಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ
ಓದಿಗೆ
ಬಾಸ್
ಚಿತ್ರದಲ್ಲಿ
ಖ್ಯಾತ
ತಮಿಳು
ನಟ
ಶಿವಾಜಿ
ಪ್ರಭು