twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಸಾರಥಿ ಕಾಪಾಡಿದ ಆಟೋರಾಜ ಶಂಕರ್

    By Mahesh
    |

    Darshan Movie Sarathi good opening
    ಜೈಲುಹಕ್ಕಿ ದರ್ಶನ್ ಅವರ ಹೊಚ್ಚ ಹೊಸ ಸಿನಿಮಾ 'ಸಾರಥಿ' ಇಂದು ರಾಜ್ಯದ ಎಲ್ಲೆಡೆ ತೆರೆಕಂಡಿದೆ. ಆರಂಭದ ವರದಿಗಳ ಪ್ರಕಾರ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಆದರೆ, ಸಾರಥಿ ಚಿತ್ರದ ಆಟೋಗೆ ಇಂಧನವಾಗಿರುವುದು ಶಂಕರ್ ನಾಗ್ ಎಂಬ ಬ್ರ್ಯಾಂಡ್ ನೇಮ್ ಎಂಬುದನ್ನು ಮರೆಯುವಂತಿಲ್ಲ.

    ಎಂದೋ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಸೆ.30 ರಂದೇ ಬಿಡುಗಡೆ ಮಾಡಿದ ನಿರ್ಮಾಪಕರ ಸತ್ಯಪ್ರಕಾಶ್ ಅವರ ವ್ಯವಹಾರ ಜಾಣ್ಮೆಯನ್ನು ಮೆಚ್ಚಬೇಕಾದ್ದೆ. ಸೆ.30 ಶಂಕರ್ ನಾಗ್ ಅವರ ತಿಥಿ ದಿನವಾಗಿದೆ. ಜೊತೆಗೆ ಸಾರಥಿ ಚಿತ್ರ ಕೂಡಾ ಆಟೋರಿಕ್ಷಾ ಚಾಲಕರ ಕಥೆ ಹೇಳುತ್ತದೆ. ಶಂಕರ್ ಅಭಿಮಾನಿಯಾಗಿರುವ ಸತ್ಯ ಪ್ರಕಾಶ್ ಗೆ ಇಂದಿಗಿಂತ ಪ್ರಾಶಸ್ತ್ಯವಾದ ದಿನ ಬೇಕೆ.

    ಸಾರಥಿ ಚಿತ್ರದ ಆಡಿಯೋ ಕೂಡಾ ಆಟೋ ಚಾಲಕರ ನಡುವೆ ಬಿಡುಗಡೆಗೊಂಡಿತ್ತು. ಕತ್ರಿಗುಪ್ಪೆ ಶಂಕರನಾಗ್ ವೃತ್ತದ ಆಟೋಚಾಲಕರ ಸಂಘ, ಆದರ್ಶ ಆಟೋ ಚಾಲಕರ ಸಂಘ ಸೇರಿದಂತೆ ಹಲವಾರು ಆಟೋರಿಕ್ಷಾ ಚಾಲಕರ ಸಂಘಟನೆಗಳು ನರ್ತಕಿ ಟಾಕೀಸ್ ಹತ್ತಿರ ಜಮಾಯಿಸಿದ್ದಾರೆ.

    ಬಾಲ್ಕನಿಯಲ್ಲಿ ನಿಂತು ಹರಿದು ಬರುತ್ತಿರುವ ಜನಸಮೂಹವನ್ನು ಕಂಡ ನಿರ್ದೇಶಕ ದಿನಕರ್ ತೂಗುದೀಪ ಹಾಗೆ ಆಕಾಶದ ಕಡೆಗೆ ಕೈ ಎತ್ತಿ ಶಂಕರ್ ನಾಗ್ ಅವರನ್ನು ಸ್ಮರಿಸಿದ್ದಾರೆ.

    ನರ್ತಕಿ ಅಲ್ಲದೆ, 15ಕ್ಕೂ ಹೆಚ್ಚು ಮಲ್ಟಿಪೆಕ್ಸ್ ಸ್ಕ್ರೀನ್ ಗಳು, 90ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜನಭರಿತ ಪ್ರದರ್ಶನ ಕಂಡಿದೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಕಿವಿಗೆ ಇನ್ನೂ ಅಭಿಮಾನಿಗಳ ಜೈಕಾರ ಕೇಳಿಸಿಲ್ಲ. ಕೇಳಿಸಿದ್ದರೆ ಕಣ್ಣಾಲಿಗಳು ತುಂಬಿ ಬರುತ್ತಿದ್ದದ್ದಂತೂ ಗ್ಯಾರಂಟಿ.

    English summary
    Kannada movie Sarathi with Challenging Star Darshan Toogudeepa and Deepa Sannidhi in the lead has got very good response from the audience. Late Actor Shankar Nagar USP has worked to pull the crowd to theaters across Karnataka.
    Friday, September 30, 2011, 11:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X