Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅದೊಂದು ಕ್ರೆೃಮ್‘ನ್ಯೂಸ್’ನ್ನು ಉಪೇಂದ್ರ ವರದಿ ಮಾಡ್ತಾರಂತೆ!
ಉಪೇಂದ್ರ ಸದ್ಯದಲ್ಲೇ ಹೊಸದೊಂದು 'ನ್ಯೂಸ್" ನೀಡಲಿದ್ದಾರೆ. ಅವರಿಗೆ ಮನೆ, ಮದುವೆ ಮತ್ತು ಮಗು ಮೂರೂ ಆಗಿದೆ. ಇನ್ನೇನು ನ್ಯೂಸ್ ಕೊಡ್ತಾರೆ ಅಂತಾನಾ?. ಯಾಕೆ ತಾರೆಯರ ನ್ಯೂಸ್ ಅಂದ್ರೆ ಗ್ಲಾಮರ್ ಆಗಿರ್ಲೇ ಬೇಕಾ. ಅದು ಬಿಟ್ರೆ ಪತ್ರಕರ್ತರು ಬೇರೇನು ಬರೆಯ ಬಾರ್ದಾ! ಹಾಗಾದ್ರೆ ಉಪ್ಪಿಗೆ ಬಿಟ್ಟು ಬಿಡಿ. ಅವರೇ ವರದಿ ಮಾಡುತ್ತೇನೆ ಅಂದಿದ್ದಾರೆ. ಅದೂ ಯಶಸ್ವಿಯಾಗಿ. ಆದ್ರೆ ಅದೊಂದು ಕ್ರೆೃಮ್ ನ್ಯೂಸ್. ದಟ್ಸ್ ಉಪೇಂದ್ರ ಇನ್ 'ನ್ಯೂಸ್"
ಉಪೇಂದ್ರ ಅಭಿನಯದ 'ನ್ಯೂಸ್" ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರಲ್ಲಿ ಉಪೇಂದ್ರ ಪತ್ರಕರ್ತನ ಪಾತ್ರ. ಅರ್ಥಾತ್ ಕ್ರೆೃಮ್ ರಿಪೋರ್ಟ್ರ್. ಇಲ್ಲಾಂದ್ರೆ ಕ್ಲೈಮ್ಯಾಕ್ಸ್ ಹೆಂಗೆ?. ಇದಕ್ಕಿಂತ ಹೆಚ್ಚಿನ ಕಥೆಯನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ. ಕೇಳಿದ್ರೆ ಈಗ ನಾನು ನಿಮ್ಹಂಗೆ 'ಪತ್ರಕರ್ತ" ಎಂದು ಬಿಡ್ತಾರೆ. ಇದರ ನಾಯಕಿ ರೀಮಾ ಸೇನ್ ಪಾತ್ರವೂ 'ಪತ್ರಕರ್ತೆ". ಈ ಪತ್ರಕರ್ತರ ಜೋಡಿ ಚಿತ್ರದಲ್ಲಿ ಕ್ರೈಂ ರಿಪೋರ್ಟ್ ಕೆಲಸ ಮಾಡುತ್ತದೆ ಎನ್ನುವುದು ನೈಜ ಪತ್ರಕರ್ತರಿಗೆ ಅವರು ಬಿಟ್ಟುಕೊಟ್ಟ ವಿಚಾರ.
ಈ ನಡುವೆ ಉಪೇಂದ್ರ ಚಿತ್ರಗಳಿಗೆ ಒಂದು ಸಣ್ಣ ಬ್ರೇಕ್ ಬಿದ್ದಿತ್ತು . ಆ ಬಳಿಕ 'ಓಂಕಾರ" ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದರು. ಆದರೆ'ಓಂಕಾರ" ಬಿಡುಗಡೆಯ ಮುನ್ನವೇ 'ನ್ಯೂಸ್" ಹಾಗೂ 'ಉಪ್ಪಿ ದಾದಾ ಎಂ.ಬಿ.ಬಿಎಸ್" ಚಿತ್ರಗಳು ಸೆಟ್ಟೇರಿವೆ. ಅಲ್ಲದೇ ಉಪೇಂದ್ರ ಅಭಿನಯದ ಇನ್ನೂ ಹಲವು ಚಿತ್ರಗಳು ಸೆಟ್ಟೇರುವ ಸೂಚನೆಯಿದೆ.
ನ್ಯೂಸ್ ಚಿತ್ರದಲ್ಲಿ ಇನ್ನೂ ಇಬ್ಬರು ನಾಯಕಿಯರು. ರೇಣುಕಾ ಮೆನನ್ ಹಾಗೂ ಅಮೃತಾ ಸಹ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಗೋಪಿ, ಶ್ರೀರಾಮ್ ಹಾಗೂ ಕುಮಾರ್ನಿರ್ಮಿಸುತ್ತಿದ್ದಾರೆ. ಚಿತ್ರದ ನಿರ್ದೇಶನ ಎಂ.ಕೆ ಮಹೇಶ್ವರ್. ಕಥೆ ಹಾಗೂ ಚಿತ್ರ ಕಥೆ ಕೂಡ ಅವರದ್ದು. ಹಳೆ ಗೆಳೆಯ ಗುರುಕಿರಣ್ ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಇದೇ 'ನ್ಯೂಸ್"!