Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಬ್ರಿ ಮಂಜು ಇಲೆಕ್ಷನ್ಗೆ ನಿಲ್ತಾರಂತೆ
*ದಟ್ಸ್ಕನ್ನಡ ಬ್ಯೂರೋ
ನವರಸ ನಾಯಕ ಜಗ್ಗೇಶ್ ಹಾಗೂ ನಿರ್ಮಾಪಕ ಕೊಬ್ರಿ ಮಂಜು ಅಂಗಿಯ ತೋಳು ಮಡಿಸುತ್ತಿದ್ದಾರೆ- ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಇವರಿಬ್ಬರೂ ಅಖಾಡಕ್ಕೆ ಇಳಿಯುವರೇ?
ವಿಷ್ಣುವರ್ಧನ್ ಲೇಟೆಸ್ಟ್ ಚಿತ್ರ ಹೃದಯವಂತದ ಚಿತ್ರೀರಣ ಪೂರ್ತಿಯಾಗಿರುವ ಸಂತೋಷ ಹಂಚಿಕೊಳ್ಳಲು ಇತ್ತೀಚೆಗೆ ಕೊಬ್ರಿ ಮಂಜು ಆಯೋಜಿಸಿದ್ದ ಕೂಟದಲ್ಲಿ ರಾಜಕೀಯದ ವಾಸನೆ ಬಡಿಯಿತು. ಜಗ್ಗಿಯಂತೆ ಮಂಜು ಕೂಡ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನವರು. ಮಂಜು ಜನತಾ ದಳ ಪಕ್ಷದಿಂದ ಟಿಕೇಟು ಪಡೆಯುವ ಆಸೆ ಹೊಂದಿದ್ದಾರೆ. ಜಗ್ಗಿ ಯಾವತ್ತಿದ್ದರೂ ಹಸ್ತದ ಗುರುತಿನ ಪಾರ್ಟಿ.
ಒಂದು ವೇಳೆ ಜಗ್ಗೇಶ್ ತುರುವೇಕೆರೆ ಕ್ಷೇತ್ರದಿಂದ ಅಸೆಂಬ್ಲಿ ಚುನಾವಣೆಗೆ ನಿಂತರೂ ನಾನು ಹಿಂದೇಟು ಹಾಕುವುದಿಲ್ಲ. ಬುದ್ಧಿಜೀವಿಗಳಿದ್ದುಕೊಂಡೂ ತುರುವೇಕೆರೆಯ ಉದ್ಧಾರ ಇನ್ನೂ ಆಗಿಲ್ಲ. ಅದನ್ನು ಮಾಡುವುದು ನನ್ನ ಸಂಕಲ್ಪ. ಒಂದು ವೇಳೆ ಚುನಾವಣೆ ದಿನಾಂಕ ತೀರಾ ಮುಂಚೆಯೇ ಪ್ರಕಟವಾದರೆ, ಚಿತ್ರಲೋಕಕ್ಕೆ ಅಲ್ಪ ವಿರಾಮ ಹಾಕುವೆ ಅಂತ ಮನಸ್ಸಿನ ತುಂಬಾ ಚುನಾವಣೆಯನ್ನೇ ತುಂಬಿಕೊಂಡಿರುವ ಮಂಜು ಮಿನಿ ರಾಜಕೀಯ ಭಾಷಣವನ್ನೇ ಹೊಡೆದುಬಿಟ್ಟರು.
ಅಂದಹಾಗೆ, ಮಂಜು ‘ಟೋ ಮಂಜು’ ಎಂಬ ಚಿತ್ರದ ಮೂಲಕ ನಾಯಕರಾಗುವ ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಚುನಾವಣೆ ದಿನಾಂಕ ಪ್ರಕಟವಾಗುವ ಹೊತ್ತಿಗೆ ಈ ಚಿತ್ರ ಮುಗಿಸುವುದು ಅವರ ಹರೀಬರಿ. ಒಂದು ವೇಳೆ ಆಗದಿದ್ದರೂ ಚಿಂತಿಲ್ಲ. ಮೊದಲು ಇಲೆಕ್ಷನ್ನು, ಆಮೇಲೆ ಸಿನಿಮಾ ಟೆನ್ಷನ್ನು ಅಂತಾರೆ ಮಂಜು.
ಚುನಾವಣೆ ಬಗ್ಗೆ ಜಗ್ಗಿಯ ರೀಯಾಕ್ಷನ್ ಕೇಳೋಕೆ ನಡೆಸಿದ ಯತ್ನ ವಿಫಲವಾಯಿತು. ಅವರ ಮೊಬೈಲು ಸ್ವಿಚ್ ಆಫ್ ಆಗಿತ್ತು.
ಮುಖಪುಟ / ಸ್ಯಾಂಡಲ್ವುಡ್