Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೂಟಿಂಗ್ ವೇಳೆ ಸುದೀಪ್ಗೆ ಗಾಯ !
ಬೆಂಗಳೂರು : ಚಿತ್ರನಟ ಸುದೀಪ್ ಚಿತ್ರೀಕರಣದಲ್ಲಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ಸೆ.29ರ ಬುಧವಾರ ನಡೆದಿದೆ. ಅವರ ಎಡಗಣ್ಣಿಗೆ ತೀವ್ರವಾದ ಪೆಟ್ಟಾಗಿದ್ದು, ವೈದ್ಯರು ಐದು ಹೊಲಿಗೆ ಹಾಕಿದ್ದಾರೆ.
ನಗರದ ಹೊರವಲಯದ ತಾವರೇಕೆರೆಯ ಕಾರ್ಖಾನೆಯಲ್ಲಿ ನಡೆಸಲಾಗುತ್ತಿದ್ದ ಸುದೀಪ್ ನಾಯಕತ್ವದ ಮಹಾರಾಜ ಚಿತ್ರದ ಹೊಡೆದಾಟದ ಸನ್ನಿವೇಶದ ಚಿತ್ರೀಕರಣದಲ್ಲಿ ಈ ದುರಂತ ಸಂಭವಿಸಿದೆ. ಗಾಯಗೊಂಡ ಸುದೀಪ್ರನ್ನು ಚಿಕಿತ್ಸೆಗಾಗಿ ಬಸವೇಶ್ವರನಗರದ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ತುರ್ತು ಚಿಕಿತ್ಸೆ ನೀಡಿ, ಆವರ ಎಡ ಭಾಗದ ಕಣ್ಣಿಗೆ ಐದು ಹೊಲಿಗೆ ಹಾಕಿದರು.
ತುಸು ಚೇತರಿಕೆ ಬಂದ ತಕ್ಷಣ ಗಾಯದ ನೋವನ್ನು ಮರೆತು, ಚಿತ್ರೀಕರಣದಲ್ಲಿ ಪಾಲ್ಗೊಂಡು ತಮ್ಮ ಕೆಲಸವನ್ನು ಪೂರ್ಣಗೊಳಿಸಿರುವುದು ಸುದೀಪ್ನ ಕ್ರಿಯಾಶೀಲತೆಗೆ ನಿದರ್ಶನ. ಹೆಚ್ಚಿನ ತೊಂದರೆಯಿಲ್ಲದೇ ಸುದೀಪ್ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಐದು ದಿನಗಳ ಕಾಲ ವಿಶ್ರಾಂತಿ ಪಡೆಯಲು ಅವರಿಗೆ ಸಲಹೆ ನೀಡಿದ್ದಾರೆ.
ಮಹಾರಾಜ ಚಿತ್ರದ ಅಂತಿಮ ದೃಶ್ಯದಲ್ಲಿ ಸುದೀಪ್ ಹಾಗೂ ನಟ ಅವಿನಾಶ್ ನಡುವೆ ಖಡ್ಗಗಳನ್ನು ಹಿಡಿದು ಹೊಡೆದಾಡುವ ಸನ್ನಿ ವೇಶವಿದೆ. ಈ ಸಂದರ್ಭಕ್ಕೆ ನಕಲಿ ಖಡ್ಗಗಳನ್ನು ಬಳಸಲು ಅವಿನಾಶ್ ನೀಡಿದ ಸಲಹೆಗೆ, ಚಿತ್ರದ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಸಮ್ಮತಿಸಿದ್ದರು. ಆದರೆ ದೃಶ್ಯನೈಜವಾಗಿರಲಿ ಎಂದು ಸುದೀಪ್ ಅಸಲಿ ಖಡ್ಗಗಳನ್ನು ಬಳಸಲು ಸೂಚಿಸಿದ್ದರು. ಮೊದಲ ಶಾಟ್ ಚೆನ್ನಾಗಿ ಬಂದಿತ್ತು. ಎರಡನೇ ಶಾಟ್ನಲ್ಲಿ ಅವಿನಾಶ್ ಹಿಡಿದಿದ್ದ ಖಡ್ಗದ ಚೂಪು ತುದಿ, ಸುದೀಪ್ರ ಕಣ್ಣಿಗೆ ತಾಕಿದೆ. ಈ ಆಕಸ್ಮಿಕ ಘಟನೆಗೆ ನಟ ಅವಿನಾಶ್ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.(ಇನ್ಫೋ ವಾರ್ತೆ)