Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಋತುಮಾಸ, ಇದು ಹಂಸ ವಿಲಾಸ...
ನಾಡಿನ ಜಾನಪದ ಹಾಡು, ಕುಣಿತ, ಅಭಿನಯ ಹೀಗೆ ಅಚ್ಚ ಕನ್ನಡ ಸಂಸ್ಕೃತಿ ಬಿಂಬಿಸಲು ಹಂಸಲೇಖ ಮ್ಯೂಸಿಕ್ ಟ್ರಸ್ಟ್ ಸಜ್ಜಾಗಿದೆ. ನ.1 ರ ರಾಜ್ಯೋತ್ಸವದಂದು ನಗರದ ಸ್ವಾಮಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಋತು ಹಬ್ಬಕ್ಕೆ ಚಾಲನೆ ನೀಡುವುದಾಗಿ ಹಂಸಲೇಖ ತಿಳಿಸಿದ್ದಾರೆ.
ಸಾಹಿತ್ಯ, ಜಾನಪದ ಸಂಗೀತ, ಮಕ್ಕಳ ರಂಗಭೂಮಿ, ಮಹಿಳೆಯರ ಸಂಸ್ಕೃತಿ ಸಿರಿ, ನೈಜ ಹಾಸ್ಯದ ಅನಾವರಣ ಋತುಹಬ್ಬದ ವಿಶೇಷ. ನಾಡಿನ ಜಾನಪದ ಸಂಪತ್ತಿನ ಪ್ರದರ್ಶನಕ್ಕೆವಿವಿಧ ಭಾಗಗಳ ಕಲಾವಿದರನ್ನು ಬಳಸಿಕೊಳ್ಳ ಲಾಗುವುದು. ಜಾನಪದ ಸಾಹಿತ್ಯದಲ್ಲಿ ನಡೆದಷ್ಟು ಸಂಶೋಧನೆ, ಜಾನಪದ ಸಂಗೀತದಲ್ಲಿ ನಡೆದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಈ ಪ್ರಯತ್ನ ಹಂಸಲೇಖ ಮ್ಯೂಸಿಕ್ಟ್ರಸ್ಟ್ ನಿಂದ ನಡೆದಿದೆ. ಅದರ ಫಲಶ್ರುತಿಯನ್ನು ಋತು ಹಬ್ಬದಲ್ಲಿ ಅನುಭವಿಸಬಹುದು ಎಂದು ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.
ಋತು ಹಬ್ಬದ ವಿವರ: ಮಾಸಕ್ಕೊಂದು ಹೊಸ ಹೆಸರಿಟ್ಟು ಹಂಸಲೇಖ ಹಬ್ಬಕ್ಕೆ ಕಳೆತುಂಬಿದ್ದಾರೆ. ನವೆಂಬರ್ (ರಾಜ್ಯೋತ್ಸವ- ಕವಿಮಾಸ), ಡಿಸೆಂಬರ್(ಕ್ರಿಸ್ಮಸ್-ಕ್ರಿಸ್ಮಾಸ), ಜನವರಿ(ಗಣರಾಜ್ಯೋತ್ಸವ-ಪ್ರಜಾಮಾಸ), ಫೆಬ್ರವರಿ(ಶಿವ ರಾತ್ರಿ-ನಗುಮಾಸ), ಮಾರ್ಚಿ(ಯುಗಾದಿ-ಕವಿಮಾಸ), ಏಪ್ರಿಲ್(ಅಂಬೇಡ್ಕರ್ ಜಯಂತಿ-ಸಮತಾ ಮಾಸ), ಮೇ(ಬುದ್ಧ ಪೂರ್ಣಿಮೆ-ಬಸವಮಾಸ), ಜೂನ್(ದೇಸಿ ಮಾಸ), ಜುಲೈ(ಜಾನಪದಾಚರಣೆ ಅಂಗವಾಗಿ-ಬಿಸಿಲ್ ಮಾಸ), ಆಗಸ್ಟ್(ಸ್ವಾತಂತ್ರ್ಯದಿನಾಚರಣೆ-ಸ್ವತಂತ್ರ ಮಾಸ), ಸೆಪ್ಟಂಬರ್(ಗಣೇಶ ಚತುರ್ಥಿ-ವಿದ್ಯಾಮಾಸ), ಅಕ್ಟೋಬರ್(ಗಾಂಧಿ ಜಯಂತಿ-ಶಾಂತಿ ಮಾಸ) .
ಅರೆರೆ ಹಂಸಲೇಖಾ, ಸಿನಿಮಾ ಮಾಸವನ್ನೇ ಮರೆತುಬಿಟ್ಟಿದ್ದೀರಲ್ರೀ? ಇದು ಮೋಸ ಎನ್ನುತ್ತಿದ್ದಾರೆ ರವಿಚಂದ್ರನ್!