ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಚ್ಚನ್, ಐಶ್?
- ದಟ್ಸ್ಕನ್ನಡ ಬ್ಯೂರೋ
‘ಕ್ಯೋಂ ಹೋಗಯಾನಾ’ ಎಂಬ ಹಿಂದಿ ಚಿತ್ರದ ಶೂಟಿಂಗಲ್ಲಿ ಬ್ಯುಸಿಯಾಗಿರುವ ಉಭಯ ತಾರೆಗಳು ಮಡಿಕೇರಿ ಸುತ್ತಿಕೊಂಡು ಇದೀಗ ಕುಂದಾಪುರದಲ್ಲಿದ್ದಾರೆ. ಇವರಿಬ್ಬರ ಒಪ್ಪಿಗೆಗೆ ಕರ್ನಾಟಕ ಸರ್ಕಾರ ಕಾಯುತ್ತಿದ್ದು, ಅದು ಸಿಕ್ಕ ತಕ್ಷಣವೇ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದೆ.
ಅಮಿತಾಬ್ ಹಾಗೂ ಐಶ್ವರ್ಯ ಪೋಲಿಯೋ ಜಾಗೃತಿ ಕಾರ್ಯಕ್ರಮದ ಮಾಡೆಲ್ಗಳೂ ಹೌದು. ಇತ್ತೀಚೆಗೆ ಟೀವಿಯಲ್ಲಿ ಜೋರಾಗಿ ಕಾಣಿಸಿಕೊಳ್ಳುತ್ತಿರುವ ಬಚ್ಚನ್ ಹಾಗೂ ಐಶ್ವರ್ಯಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಯಾಕೆಂದರೆ, ಅವತ್ತು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಯಾವುದಾದರೂ ಹಳ್ಳಿಯಲ್ಲಿ ಇಬ್ಬರೂ ತಾರೆಯರು ಮಗುವಿನ ಬಾಯಿಗೆ ಲಸಿಕೆ ಹಾಕುವ ಸಂಭವವಿದೆ. ಅದು ತುಮಕೂರು ಜಿಲ್ಲೆಯ ಯಾವುದಾದರೂ ಹಳ್ಳಿಯೇ ಯಾಕಾಗಬಾರದು ಅನ್ನುತ್ತಿದೆ ಸರ್ಕಾರ.
ಬಚ್ಚನ್ ಹಾಗೂ ಐಶ್ ಕಾರ್ಯಕ್ರಮಕ್ಕೆ ಒಪ್ಪಿದಲ್ಲಿ, ಬರುವ ಭಾನುವಾರ ತುಮಕೂರು ರಂಗೋರಂಗು.
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications