ಸುನಾಮಿ: ರಾಜ್‌-ವಿಷ್ಣು ನೆರವು

By Super

ಬೆಂಗಳೂರು : ಸುನಾಮಿ ಸಂತ್ರಸ್ತರ ನೆರವಿಗಾಗಿ ರಾಜ್ಯವೂ ಸೇರಿದಂತೆ ದೇಶದ ವಿವಿಧೆಡೆಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿದ್ದು , ಕನ್ನಡ ಚಿತ್ರೋದ್ಯಮ ಕೂಡ ಸಂತ್ರಸ್ತರ ನೆರವಿಗೆ ಕೈಜೋಡಿಸಿದೆ.

ವರನಟ ಡಾ.ರಾಜ್‌ಕುಮಾರ್‌ 5 ಲಕ್ಷ ರುಪಾಯಿಗಳ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಮತ್ತೊಬ್ಬ ಖ್ಯಾತ ನಟ ವಿಷ್ಣುವರ್ಧನ್‌ ಸ್ನೇಹಲೋಕ ಬಳಗದ ಪರವಾಗಿ 1 ಲಕ್ಷ ರುಪಾಯಿಗಳ ನೆರವನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹದ ನಿಧಿಗೆ ನೀಡಿದ್ದಾರೆ.

ಬೆಂಗಳೂರಿನ ಟೆನ್ನಿಸ್‌ ಕ್ಲಬ್‌ನಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಡಿ.29ರ ಬುಧವಾರ ರಾಜ್‌ ದಂಪತಿಗಳು 5 ಲಕ್ಷ ರುಪಾಯಿಗಳ ಚೆಕ್‌ ನೀಡಿದರು. ವಿಷ್ಣುವರ್ಧನ್‌ ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ನ ಅಜಯ್‌ ಮೆನನ್‌ ಅವರಿಗೆ 1 ಲಕ್ಷ ರುಪಾಯಿ ಚೆಕ್‌ ನೀಡಿದರು. ಇದೇ ಸಂದರ್ಭದಲ್ಲಿ ಅಮೆರಿಕಾ ನಿವಾಸಿ ನಟರಾಜ್‌ 5 ಲಕ್ಷ ರುಪಾಯಿಗಳ ನೆರವು ನೀಡಿದರು.

ರಾಜ್ಯದ ಟೆಲಿವಿಷನ್‌ ಕಲಾವಿದರು ತಂತ್ರಜ್ಞರು ಸುನಾಮಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸುತ್ತಿದೆ. ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ದೇಣಿಗೆ ಸಂಗ್ರಹಿಸಲು ಕಿರುತೆರೆ ತಂತ್ರಜ್ಞರು-ಕಲಾವಿದರು ಉದ್ದೇಶಿಸಿದ್ದಾರೆ.(ಇನ್ಫೋ ವಾರ್ತೆ)

English summary
Dr. Rajkumar donates Rs. 5 lakhs to Tsunami Relief Fund
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X