Don't Miss!
- News
Breaking; ಬುಧವಾರ ಮೇಕೆದಾಟು ಯೋಜನೆಗೆ ಸಿಗಲಿದೆ ಒಪ್ಪಿಗೆ?
- Lifestyle
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಶ್ಚಿಕ, ಧನು ರಾಶಿಯವರಿಗೆ ಆರ್ಥಿಕವಾಗಿ ಶುಭ ದಿನ
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಮತ್ತೆ ಗನ್ ಹಿಡಿದು 'ಗೋಡ್ಸೆ' ಆದ ಹರೀಶ್ ರಾಜ್
ಗನ್ ಚಿತ್ರ ಹಾಗೂ ಆತ್ಮಹತ್ಯೆ ಪ್ರಯತ್ನದ ಮೂಲಕ ಸಾಕಷ್ಟು ಸುದ್ದಿಯಾಗಿರುವ ನಟ ಹರೀಶ್ ರಾಜ್, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಅವರೀಗ ನಾಥೂರಾಮ್ ಗೋಡ್ಸೆ. ಅಂದರೆ, ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕೂರ್ಮಾವತಾರ' ಚಿತ್ರದಲ್ಲಿ ಅವರು ಗೋಡ್ಸೆ ಪಾತ್ರ ಮಾಡಿದ್ದಾರೆ.
ಗನ್ ಗಲಾಟೆಯ ನಂತರ ಈ ಪಾತ್ರ ಹರೀಶ್ ಪಾಲಾಗಿದ್ದಲ್ಲ, ಅದಕ್ಕೂ ಮೊದಲೇ ಕಥೆ ಹೆಣೆಯುವಾಗಲೇ ಕಾಸರವಳ್ಳಿ ಮನಸ್ಸಿನಲ್ಲಿ ಹರೀಶ್ ರಾಜ್ ಇದ್ದರೆಂಬ ಸ್ಪಷ್ಟೀಕರಣ ಸಿಕ್ಕಿದೆ. ಆದರೆ ಗನ್ ಗಲಾಟೆಯ ನಂತರ ಹರೀಶ್ ರಾಜ್ ರನ್ನು ಹುಡುಕಿಕೊಂಡು ಸಾಕಷ್ಟು ವಿಭಿನ್ನ ಪಾತ್ರಗಳು ಬರುತ್ತಿವೆಯಂತೆ.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಚಿತ್ರದಲ್ಲಿ ನಾರದನ ಪಾತ್ರ ಮಾಡಿದ್ದಲ್ಲದೇ ನಿಗೂಢ, ಗೋವಿಂದಾಯ ನಮಃ ಹಾಗೂ ಚಾಲೆಂಜ್ ಚಿತ್ರಗಳಲ್ಲಿ ಕೂಡ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೇವಲ ಹಿರಿತೆರೆಯಲ್ಲಿ ಅಲ್ಲದೇ ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಿರುವ ಹರೀಶ್, ಸದ್ಯದಲ್ಲೇ ಕಸ್ತೂರಿವಾಹಿನಿಯ 'ಜಾಕ್ ಪಟ್' ರಿಯಾಲಿಟಿ ಶೋ ಕೂಡ ನಡೆಸಿಕೊಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)