Don't Miss!
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರೇಜಿಸ್ಟಾರ್ ರವಿಚಂದ್ರನ್ ಎಲ್ಲಿ ಹೋದರು?
ಈ ಬಾರಿ ಕ್ರೇಜಿಸ್ಟಾರ್ ರವಿಚಂದ್ರ ತಮ್ಮ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟು ಮಾಡಿದ್ದಾರೆ. ಅವರ ಹುಟ್ಟುಹಬ್ಬ ಎಂದು ಅವರ ಅಭಿಮಾನಿಗಳು ಡಾ.ರಾಜ್ ಕುಮಾರ್ ರಸ್ತೆಯ ಅವರ ಮನೆಗೆ ಹೋದರೆ ಅವರ ಸುಳಿವಿಲ್ಲ. ಎಲ್ಲಿ ಹೋದರು ರವಿಚಂದ್ರನ್.
ಈ ಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಮೊದಲೆ ರವಿಚಂದ್ರನ್ ತನ್ನ ಅಭಿಮಾನಿಗಳಿಗೆ ತಿಳಿಸಿದ್ದರು. ಅವರ ಮಹತ್ವಾಕಾಂಕ್ಷಿ ಚಿತ್ರ 'ಮಂಜಿನಹನಿ' ಚಿತ್ರ ಬಿಡುಗಡೆ ದಿನವೇ ನನ್ನ ಹುಟ್ಟುಹಬ್ಬ ಎಂದಿದ್ದರು. ದಯವಿಟ್ಟು ಕೇಕು, ಹೂವು, ಹಣ್ಣು ತರಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು.
ಅಭಿಮಾನಿಗಳೇನೋ ರವಿ ಮನೆ ಮುಂದೆ ಜಮಾಯಿಸಿದರು. ಆದರೆ ಅವರು ಮಾತ್ರ ಕಾರ್ಯನಿಮಿತ್ತ ಗೋವಾದಲ್ಲಿದ್ದರು. 'ಮಂಜಿನ ಹನಿ' ಬಿಡುಗಡೆ ದಿನ ಡಬ್ಬಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ರವಿ ಕಾತುರದಿಂದಿದ್ದಾರೆ.
ರವಿಚಂದ್ರನ್ ಅವರ ಆತ್ಮೀಯ ಗೆಳೆಯ ಹಂಸಲೇಖ ಅವರು ಹುಟ್ಟುಹಬ್ಬ ಶುಭಾಶಯ ಕೋರಿದ್ದಾರೆ. ಹಂಸಲೇಖ ಅವರಿಗೆ ರವಿಚಂದ್ರನ್ ಯಾವಾಗಲು ಕನಸುಗಾರ. ಸದಾ ಕನಸಿನಲ್ಲಿ ಮುಳುಗಿರುವ ರವಿ ತಮ್ಮ ಚಿತ್ರದ ಮೂಲಕ ಏನಾದರೂ ಕೊಡಲಿ ಎಂದಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)