Don't Miss!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- News ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಲು ಮನಾಲಿಯಲ್ಲಿ 'ಗಂಗಾ ಕಾವೇರಿ' ಹಾಡು
'ಗಂಗಾ ಕಾವೇರಿ' ಚಿತ್ರದ ಹಾಡುಗಳ ಚಿತ್ರೀಕರಣ ಹಿಮಾಲಯದ ಸುಂದರ ಪರಿಸರದಲ್ಲಿ ಭರದಿಂದ ಸಾಗಿದೆ. ಹಿಮಾಲಯ ಅಂದ ತಕ್ಷಣ ನಮಗೆ ನೆನಪಾಗುವುದು ಅದೊಂದು ಕರ್ಮಭೂಮಿ, ದೇವಭೂಮಿ, ಪುಣ್ಯಭೂಮಿ, ತಪೋಭೂಮಿ, ಧ್ಯಾನಭೂಮಿ, ಜ್ಞಾನಭೂಮಿ, ಧಾರ್ಮಿಕ-ಸಾಂಸ್ಕೃತಿಕ-ದೈವಿಕ ಅಂಶಗಳ ಶೃಂಗಭೂಮಿ ಎಂದು! ನಾಲ್ಕು ವೇದಗಳು, ಹದಿನೆಂಟು ಪುರಾಣಗಳು, ಮಹಾಭಾರತ, ಬ್ರಹ್ಮಸೂತ್ರಗಳಂಥ ಅಧ್ಯಾತ್ಮದ ಉಗಮಸ್ಥಾನ. ಅಲ್ಲಿನ ಚಿತ್ರೀಕರಣ ಎಂತಹವರಿಗೂ ಮೈನವಿರೇಳಿಸುತ್ತದೆ.
ಚಿತ್ರದ ಮೂಹೂರ್ತ ಸನ್ನಿವೇಶವನ್ನು ಗಂಗೆಯ ಉಗಮ ಸ್ಥಾನ ಗಂಗೋತ್ರಿಯಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಚಿತ್ರದ ನಾಯಕ ಅಕ್ಷಯ್ ಅಭಯ್ ಹಾಗೂ ನಾಯಕಿ ಮಾಹಿವಿಜ್ ಅಭಿನಯದ ಹಲವು ದೃಶ್ಯಗಳನ್ನು ಕುಲು ಮನಾಲಿಯ ಸುಂದರ ಪರಿಸರದ ಹಿನ್ನಲೆಯಲ್ಲಿ ಛಾಯಾಗ್ರಾಹಕರಾದ ಎಚ್.ಸಿ. ವೇಣು ತಮ್ಮ ಕ್ಯಾಮೆರಾದಲ್ಲಿ ಬಂಧಿಸಿದರು.
ಕುಲು ಮನಾಲಿಯ ಕಣ್ತಣಿಸುವ, ಮನ ಮಿಡಿಯುವ ಸುಂದರ ಪರಿಸರದಲ್ಲಿನ ಚಿತ್ರೀಕರಣದ ಹಾಡಿನ ದೃಶ್ಯಗಳನ್ನು ಎಚ್.ಸಿ.ವೇಣು ತಮ್ಮ ಕ್ಯಾಮೆರಾದಲ್ಲಿ ವಿಷ್ಣುಕಾಂತ್ರ ನಿರ್ದೇಶನದಲ್ಲಿ ಸೆರೆಹಿಡಿದರು. ಚಿತ್ರೀಕರಣಕ್ಕಾಗಿ ವಿಶೇಷ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಗಂಗಾ ಕಾವೇರಿ ಚಿತ್ರಕ್ಕೆಕಥೆ-ಚಿತ್ರಕಥೆ-ನಿರ್ದೇಶನ ವಿಷ್ಣುಕಾಂತ್ ಬಿ.ಜೆ. ಅವರದು.
ಚಿತ್ರದ ತಾರಾಗಣದಲ್ಲಿ ಅನಂತ್ನಾಗ್, ರಮೇಶ್ಭಟ್, ಚಿತ್ರಾ ಶಣೈ, ತಾರಾ, ರೂಪತಾರ ಸಿನಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಬಿ.ಗಣಪತಿ ಇದ್ದಾರೆ. ಸಿನಿಮಾ ಅಂಕಣಕಾರ ಗಣೇಶ್ ಕಾಸರಗೋಡು ಪ್ರಥಮ ಬಾರಿಗೆ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಕೆ.ಕಲ್ಯಾಣ ಸಂಗೀತ ನಿರ್ದೇಶಿಸುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಗಂಗಾ ಕಾವೇರಿ ಕುತೂಹಲ ಮೂಡಿಸಿದೆ.
(ದಟ್ಸ್ಕನ್ನಡ ಸಿನಿವಾರ್ತೆ)