Don't Miss!
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- News ಮತದಾನದ ದಿನ ಬೆಳಗ್ಗೆ ಸಿಗಲ್ಲ ಬಾಡಿಗೆ ವಾಹನಗಳು!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಗಡ್ಡಾಫಿ : ಉಮ-50
ಅಗಾಧ ನೆನಪಿನ ಶಕ್ತಿ. ಕವಿಗಳ ಬಗ್ಗೆ ಕಡುಕೋಪ, ಸಂಗೀತದ ಬಗ್ಗೆ ಮಡುಗಟ್ಟಿದ ಪ್ರೀತಿ. ಬದುಕೇ ಇಷ್ಟು ಅನ್ನುವ ನಿರ್ಭಾವುಕತೆ. ಇನ್ನಷ್ಟು ತೀವ್ರವಾಗಿ ಬದುಕುವ ಹುಮ್ಮಸ್ಸು. ದೂರದಿಂದ ನೋಡಿದವರು ಈತ ಕಟ್ಟುನಿಟ್ಟು ಮತ್ತು ಶಿಸ್ತಿನ ಅಪಾಯಕಾರಿ ಎಂದು ಭಾವಿಸುವುದುಂಟು. ಆ ಭಾವನೆಯನ್ನು ಹೋಗಲಾಡಿಸುವುದಕ್ಕೆ ಇದುವರೆಗೂ ಯಾವ ಪ್ರಯತ್ನವನ್ನೂ ಮಾಡಿದ್ದನ್ನು ನಾನಂತೂ ನೋಡಿಲ್ಲ. ಗೊತ್ತಿಲ್ಲದ ಫೋನ್ ನಂಬರನ್ನು ಯಾವತ್ತೂ ಎತ್ತದ, ಅಹಂಕಾರಿಗಳನ್ನು, ಕವಿಗಳನ್ನು, ಕುಹಕಿಗಳನ್ನು ಸದಾ ದೂರ ಇಡುವ, ತುಂಬ ಆಪ್ತರನ್ನೂ ಒಳಕೋಣೆಗೆ ಬಿಟ್ಟುಕೊಳ್ಳದ ಈ ಗೆಳೆಯನ ಹೆಸರು ಉದಯ ಮರಕಿಣಿ.
ನೀವು ಹತ್ತಾರು ವರ್ಷಗಳಿಂದ ಕನ್ನಡಪ್ರಭದ ಓದುಗರಾಗಿದ್ದರೆ ಉದಯ ಮರಕಿಣಿಯ ಹಾಸ್ಯದ ಪಟ್ಟಿಗೆ ಖಂಡಿತ ಸಿಲುಕಿರುತ್ತೀರಿ. ಏಕತಾನತೆ, ಅವವೇ ಮಾತುಗಳ ಚರ್ವಿತ ಚರ್ವಣ, ಓಬೀರಾಯನ ಕಾಲದ ಶೈಲಿಯಿಂದ ಸಿನಿಮಾ ವಿಮರ್ಶೆಯನ್ನು ಆಚೆಗೆಳೆದು ತಂದವರು ಉದಯ್. ಹಾಗೆ ನೋಡಿದರೆ ಸಿನಿಮಾ ಪತ್ರಿಕೋದ್ಯಮದಲ್ಲಿ ಮತ್ತೊಂದು ಅಧ್ಯಾಯವನ್ನು ಆರಂಭಿಸಿದವರು ಅವರೇ. ಅಲ್ಲಿಯ ತನಕ ಕೇವಲ ವರದಿಗಾರಿಕೆ ಮಾತ್ರ ಆಗಿದ್ದ, ಸಿನಿಮಾ ರಿಪೋರ್ಟಿಂಗ್ ಉದಯ್ ಬರಹಗಳಿಂದ ಹೊಸ ಹುಮ್ಮಸ್ಸು ಪಡಕೊಂಡಿತು. ಅನೇಕ ಕಲಾವಿದರು, ನಿರ್ದೇಶಕರು ಮರಕಿಣಿ ತಮ್ಮ ಬಗ್ಗೆ ಬರೆಯಬೇಕು ಎಂದು ಹಂಬಲಿಸುತ್ತಿದ್ದರು.