Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಬ್ಬಳ್ಳಿಯಲ್ಲಿ ಸಾದಾ ಸೀದಾ ಹೈದ ಮೈಲಾರಿ ಶತದಿನೋತ್ಸವ
ಊರಿಂದ ಓಡಿಬಂದ ಜೋಗಿ ನಾನಲ್ಲಾರಿ, ಓಮಿಂದ ಎದ್ದುಬಂದಸತ್ಯಾನು ಅಲ್ಲಾರಿ, ಹಳ್ಳಿಯ ಸೀದಾ ಸಾದಾ ಹೈದಮೈಲಾಪುರದ ಮೈಲಾರಿ...ಎಂದು ಬಂದ 'ಮೈಲಾರಿ' ಏಪ್ರಿಲ್ 1ನೇ ತಾರೀಖಿಗೆ ಶತಕ ಬಾರಿಸಲಿದ್ದಾನೆ. ಬಹಳ ಸುದೀರ್ಘ ಸಮಯದ ಬಳಿಕ ಶಿವರಾಜ್ ಕುಮಾರ್ ಚಿತ್ರ ಶತಕ ಸಿಡಿಸಿರುವುದು ಚಿತ್ರೋದ್ಯಮದಲ್ಲಿ ಹೊಸ ಅಲೆ ಎಬ್ಬಿಸಿದೆ.
ಬೆಂಗಳೂರಿನ
ನರ್ತಕಿ
ಸೇರಿದಂತೆ
ರಾಜ್ಯದ
ಇತರೆಡೆ
'ಮೈಲಾರಿ'
ಶತಕ
ಸಂಭ್ರಮದಲ್ಲಿದೆ.
ಶಿವರಾಜ್
ಕುಮಾರ್
ಅವರ
99ನೇ
ಚಿತ್ರ
ನೂರರ
ಅಂಕಿ
ದಾಟುತ್ತಿರುವುದು
ನಿರ್ಮಾಪಕರಾದ
ಕನಕಪುರ
ಶ್ರೀನಿವಾಸ್
ಹಾಗೂ
ಕೆ
ಪಿ
ಶ್ರೀಕಾಂತ್
ಅವರ
ಉತ್ಸಾಹವನ್ನು
ಇಮ್ಮಡಿಸಿದೆ.
'ಮೈಲಾರಿ'
ಚಿತ್ರದ
ಪ್ರಚಾರ
ತಂತ್ರಕ್ಕೆ
ಜೈ
ಎನ್ನಲೇಬೇಕು.
ಏಪ್ರಿಲ್ 17ರಂದು 'ಮೈಲಾರಿ' ಶತದಿನೋತ್ಸವ ಸಂಭ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಮೈಲಾರಿ ಸಡಗರ, ಸಂಭ್ರಮವನ್ನು ಶಿವಣ್ಣನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಶಿವಣ್ಣನ ವೃತ್ತಿ ಜೀವನದಲ್ಲಿ ಮೈಲಾರಿ ಹೊಸ ತಿರುವು ನೀಡಿದ ಚಿತ್ರ ಎನ್ನಬಹುದು.
ಇದೇ ಸಂತಸದಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಶಿವಣ್ಣ ನಾಯನ ನಟನಾಗಿ 'ಶಿವ' ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಮಾಸ್ ಚಿತ್ರಗಳ ಸರದಾರ ಓಂ ಪ್ರಕಾಶ್ ರಾವ್ ಆಕ್ಷನ್, ಕಟ್ ಹೇಳಲಿದ್ದಾರೆ. ಈ ಹಿಂದೆ ಶಿವಣ್ಣನ ಕೈಗೆ 'ಎಕೆ 47' ಕೊಟ್ಟು 'ಸಿಂಹದ ಮರಿ' ಮೂಲಕ ಉತ್ತಮ ಬ್ರೇಕ್ ನೀಡಿದ್ದರು. ಈ ಚಿತ್ರಕ್ಕೆ ಕ್ಯಾಮೆರಾ ಸತ್ಯ ಹೆಗಡೆ.