Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಬ್ಬಳ್ಳಿಯಲ್ಲಿ ಸಾದಾ ಸೀದಾ ಹೈದ ಮೈಲಾರಿ ಶತದಿನೋತ್ಸವ
ಊರಿಂದ ಓಡಿಬಂದ ಜೋಗಿ ನಾನಲ್ಲಾರಿ, ಓಮಿಂದ ಎದ್ದುಬಂದಸತ್ಯಾನು ಅಲ್ಲಾರಿ, ಹಳ್ಳಿಯ ಸೀದಾ ಸಾದಾ ಹೈದಮೈಲಾಪುರದ ಮೈಲಾರಿ...ಎಂದು ಬಂದ 'ಮೈಲಾರಿ' ಏಪ್ರಿಲ್ 1ನೇ ತಾರೀಖಿಗೆ ಶತಕ ಬಾರಿಸಲಿದ್ದಾನೆ. ಬಹಳ ಸುದೀರ್ಘ ಸಮಯದ ಬಳಿಕ ಶಿವರಾಜ್ ಕುಮಾರ್ ಚಿತ್ರ ಶತಕ ಸಿಡಿಸಿರುವುದು ಚಿತ್ರೋದ್ಯಮದಲ್ಲಿ ಹೊಸ ಅಲೆ ಎಬ್ಬಿಸಿದೆ.
ಬೆಂಗಳೂರಿನ
ನರ್ತಕಿ
ಸೇರಿದಂತೆ
ರಾಜ್ಯದ
ಇತರೆಡೆ
'ಮೈಲಾರಿ'
ಶತಕ
ಸಂಭ್ರಮದಲ್ಲಿದೆ.
ಶಿವರಾಜ್
ಕುಮಾರ್
ಅವರ
99ನೇ
ಚಿತ್ರ
ನೂರರ
ಅಂಕಿ
ದಾಟುತ್ತಿರುವುದು
ನಿರ್ಮಾಪಕರಾದ
ಕನಕಪುರ
ಶ್ರೀನಿವಾಸ್
ಹಾಗೂ
ಕೆ
ಪಿ
ಶ್ರೀಕಾಂತ್
ಅವರ
ಉತ್ಸಾಹವನ್ನು
ಇಮ್ಮಡಿಸಿದೆ.
'ಮೈಲಾರಿ'
ಚಿತ್ರದ
ಪ್ರಚಾರ
ತಂತ್ರಕ್ಕೆ
ಜೈ
ಎನ್ನಲೇಬೇಕು.
ಏಪ್ರಿಲ್ 17ರಂದು 'ಮೈಲಾರಿ' ಶತದಿನೋತ್ಸವ ಸಂಭ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಮೈಲಾರಿ ಸಡಗರ, ಸಂಭ್ರಮವನ್ನು ಶಿವಣ್ಣನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಶಿವಣ್ಣನ ವೃತ್ತಿ ಜೀವನದಲ್ಲಿ ಮೈಲಾರಿ ಹೊಸ ತಿರುವು ನೀಡಿದ ಚಿತ್ರ ಎನ್ನಬಹುದು.
ಇದೇ ಸಂತಸದಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಶಿವಣ್ಣ ನಾಯನ ನಟನಾಗಿ 'ಶಿವ' ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಮಾಸ್ ಚಿತ್ರಗಳ ಸರದಾರ ಓಂ ಪ್ರಕಾಶ್ ರಾವ್ ಆಕ್ಷನ್, ಕಟ್ ಹೇಳಲಿದ್ದಾರೆ. ಈ ಹಿಂದೆ ಶಿವಣ್ಣನ ಕೈಗೆ 'ಎಕೆ 47' ಕೊಟ್ಟು 'ಸಿಂಹದ ಮರಿ' ಮೂಲಕ ಉತ್ತಮ ಬ್ರೇಕ್ ನೀಡಿದ್ದರು. ಈ ಚಿತ್ರಕ್ಕೆ ಕ್ಯಾಮೆರಾ ಸತ್ಯ ಹೆಗಡೆ.