ಮತ್ತೆ ಒಂದಾದ ರೆಬೆಲ್ ಸ್ಟಾರ್ ಅಂಬಿ ನಟಿ ಭವ್ಯಾ

ಈಗ ಮತ್ತೊಮ್ಮೆ ಅತಿಥಿ ಪಾತ್ರದಲ್ಲಿ ಈ ಜೋಡಿ ಮೋಡಿ ಮಾಡಲು ಬರುತ್ತಿದೆ. ಕೆಲದಿನಗಳ ಹಿಂದೆ ತೆರೆಕಂಡು ತೋಪಾದ ಸ್ವಯಂಕೃಷಿ ಎಂಬ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅತಿಥಿ ಪಾತ್ರ ಪೋಷಿಸಿದ್ದರು. ಈಗ ಮತ್ತೆ 'ರಣ' ಚಿತ್ರದ ಮೂಲಕ ಮುಖಕ್ಕೆ ಮೇಕಪ್ ಮಾಡಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಾಯಕ ನಟ, ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಪುತ್ರ ಪಂಕಜ್.
ರಣ ಚಿತ್ರದ ಮೂಲಕ ಶ್ರೀನಿವಾಸಮೂರ್ತಿ ಎಂಬ ಹೊಸ ನಿರ್ದೇಶಕರು ಕನ್ನಡ ಬೆಳ್ಳಿಪರದೆಗೆ ಪರಿಚಯವಾಗುತ್ತಿದ್ದಾರೆ. ಈಗಾಗಲೆ 'ರಣ' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಅಂಬಿ ಅವರ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ ಮೂರ್ತಿ.
2012ರ ಜನವರಿಗೆ ಈ ಚಿತ್ರವನ್ನು ತೆರೆಗೆ ತರುವ ಪ್ಲಾನ್ನಲ್ಲಿದ್ದಾರೆ ನಿರ್ದೇಶಕರು. ಚಿತ್ರದ ಪಾತ್ರವರ್ಗದಲ್ಲಿ ಸುಪ್ರಿತಾ, ಅರ್ಚನಾ, ಸೋನಿಯಾ ಗೌಡ ನಾಯಕಿಯರು. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಕನಕ ಜನ್ಯ ಅವರದು. ವಿ ಶ್ರೀಧರ್ ಅವರ ಸಂಗೀತ, ರಾಜರತ್ನ ಅವರ ಕ್ಯಾಮೆರಾ, ಕೆಂಪರಾಜ್ ಅವರ ಸಂಕಲನ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











