‘ಹೆಜ್ಜೆ’ ತಪ್ಪಿದ ಕುಮಾರಸ್ವಾಮಿ ಚಂದ್ರ ಚಕೋರಿ ಮೂಲಕ ಮತ್ತೆ ಸಿನಿಮಾ ಕನಸುಗಳಿಗೆ ಮರಳಿದ್ದಾರೆ.

By Staff

*ದಟ್ಸ್‌ಕನ್ನಡ ಬ್ಯೂರೊ

ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಯನ್ನು ಸಿನಿಮಾ ಮಾಡುವುದಾಗಿ ಗಾಂಧಿನಗರದಲ್ಲಿ ಸರಬರ ಓಡಾಡಿ, ಆನಂತರ ಸುಸ್ತಾದವರಂತೆ ಸುಮ್ಮನಿದ್ದ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ರಾಜಕೀಯದಲ್ಲಿ ಬಿಡುವಾಯಿತೋ ಏನೋ- ಸಿನಿಮಾ ಅವರಿಗೆ ನೆನಪಾಗಿದೆ.

‘ಸೂರ್ಯವಂಶ’, ‘ಗಲಾಟೆ ಅಳಿಯಂದ್ರು’ಗಳಂಥ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಹಿನ್ನೆಲೆ ಕುಮಾರಸ್ವಾಮಿ ಅವರದು. ಪ್ರಸ್ತುತ ಕುಮಾರಸ್ವಾಮಿ ಕೈಗೆತ್ತಿಕೊಂಡಿರುವ ಚಿತ್ರ ‘ಹೆಜ್ಜೆ’ ಅಲ್ಲ-‘ಚಂದ್ರ ಚಕೋರಿ.’

ಸ್ವಾಮಿ ಅವರ ನಿಲಯದ ನಿರ್ದೇಶಕರಾದ ಸಕಲ ಕಲಾ ವಲ್ಲಭ ಎಸ್‌.ನಾರಾಯಣ್‌ ‘ಚಂದ್ರ ಚಕೋರಿ’ಯ ನಿರ್ದೇಶಕರು. ಕನ್ನಡ ಮಾತ್ರವಲ್ಲ , ತೆಲುಗಿನಲ್ಲೂ ನಿರ್ಮಾಣವಾಗುತ್ತಿರುವುದು ಈ ಚಿತ್ರದ ವಿಶೇಷ. ಈ ಮೂಲಕ ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದನ್ನು ನಿರ್ದೇಶಿಸುವ ಅವಕಾಶ ನಾರಾಯಣ್‌ಗೆ ದೊರೆತಂತಾಗಿದೆ.

ಅಂದಹಾಗೆ, ಕುಮಾರಸ್ವಾಮಿ-ನಾರಾಯಣ್‌ ಕಾಂಬಿನೇಷನ್‌ನ ಈ ಚಿತ್ರದಲ್ಲಿ ವಿಷ್ಣುವರ್ಧನ್‌ ನಟಿಸುತ್ತಿಲ್ಲ . ಏಕೆಂದರೆ ಇದು ಮೀಸೆಯ ಸಿನಿಮಾ ಅಲ್ಲ ! ಪ್ರೇಮ ಪ್ರಧಾನ ‘ಚಂದ್ರ ಚಕೋರಿ’ ಸಿನಿಮಾದಲ್ಲಿ ಸಂಪೂರ್ಣವಾಗಿ ಹೊಸಬರು ಮಿಂಚಲಿದ್ದಾರೆ. ತಾರಾಗಣ ಅಂತಿಮವಾಗಿಲ್ಲ .ಫೆಬ್ರವರಿಯಿಂದ ಶೂಟಿಂಗ್‌ ಶುರು. ಹಾಡುಗಳ ಧ್ವನಿಮುದ್ರಣ ಕಾರ್ಯ ಆರಂಭವಾಗಿದೆ.ಇದೆಲ್ಲಾ ಸರಿ. ‘ಹೆಜ್ಜೆ’ ಏನಾಯಿತು ?

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X