Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಹೆಜ್ಜೆ’ ತಪ್ಪಿದ ಕುಮಾರಸ್ವಾಮಿ ಚಂದ್ರ ಚಕೋರಿ ಮೂಲಕ ಮತ್ತೆ ಸಿನಿಮಾ ಕನಸುಗಳಿಗೆ ಮರಳಿದ್ದಾರೆ.
*ದಟ್ಸ್ಕನ್ನಡ ಬ್ಯೂರೊ
ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಯನ್ನು ಸಿನಿಮಾ ಮಾಡುವುದಾಗಿ ಗಾಂಧಿನಗರದಲ್ಲಿ ಸರಬರ ಓಡಾಡಿ, ಆನಂತರ ಸುಸ್ತಾದವರಂತೆ ಸುಮ್ಮನಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ರಾಜಕೀಯದಲ್ಲಿ ಬಿಡುವಾಯಿತೋ ಏನೋ- ಸಿನಿಮಾ ಅವರಿಗೆ ನೆನಪಾಗಿದೆ.
‘ಸೂರ್ಯವಂಶ’, ‘ಗಲಾಟೆ ಅಳಿಯಂದ್ರು’ಗಳಂಥ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಹಿನ್ನೆಲೆ ಕುಮಾರಸ್ವಾಮಿ ಅವರದು. ಪ್ರಸ್ತುತ ಕುಮಾರಸ್ವಾಮಿ ಕೈಗೆತ್ತಿಕೊಂಡಿರುವ ಚಿತ್ರ ‘ಹೆಜ್ಜೆ’ ಅಲ್ಲ-‘ಚಂದ್ರ ಚಕೋರಿ.’
ಸ್ವಾಮಿ ಅವರ ನಿಲಯದ ನಿರ್ದೇಶಕರಾದ ಸಕಲ ಕಲಾ ವಲ್ಲಭ ಎಸ್.ನಾರಾಯಣ್ ‘ಚಂದ್ರ ಚಕೋರಿ’ಯ ನಿರ್ದೇಶಕರು. ಕನ್ನಡ ಮಾತ್ರವಲ್ಲ , ತೆಲುಗಿನಲ್ಲೂ ನಿರ್ಮಾಣವಾಗುತ್ತಿರುವುದು ಈ ಚಿತ್ರದ ವಿಶೇಷ. ಈ ಮೂಲಕ ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದನ್ನು ನಿರ್ದೇಶಿಸುವ ಅವಕಾಶ ನಾರಾಯಣ್ಗೆ ದೊರೆತಂತಾಗಿದೆ.
ಅಂದಹಾಗೆ, ಕುಮಾರಸ್ವಾಮಿ-ನಾರಾಯಣ್ ಕಾಂಬಿನೇಷನ್ನ ಈ ಚಿತ್ರದಲ್ಲಿ ವಿಷ್ಣುವರ್ಧನ್ ನಟಿಸುತ್ತಿಲ್ಲ . ಏಕೆಂದರೆ ಇದು ಮೀಸೆಯ ಸಿನಿಮಾ ಅಲ್ಲ ! ಪ್ರೇಮ ಪ್ರಧಾನ ‘ಚಂದ್ರ ಚಕೋರಿ’ ಸಿನಿಮಾದಲ್ಲಿ ಸಂಪೂರ್ಣವಾಗಿ ಹೊಸಬರು ಮಿಂಚಲಿದ್ದಾರೆ. ತಾರಾಗಣ ಅಂತಿಮವಾಗಿಲ್ಲ .ಫೆಬ್ರವರಿಯಿಂದ ಶೂಟಿಂಗ್ ಶುರು. ಹಾಡುಗಳ ಧ್ವನಿಮುದ್ರಣ ಕಾರ್ಯ ಆರಂಭವಾಗಿದೆ.ಇದೆಲ್ಲಾ ಸರಿ. ‘ಹೆಜ್ಜೆ’ ಏನಾಯಿತು ?
ಮುಖಪುಟ / ಸ್ಯಾಂಡಲ್ವುಡ್