Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಗಾರು ಮಳೆ(ಭಾಗ-2) : ಸಂಜನಾ ಬದಲಿಗೆ ರಮ್ಯಾ!
ಗಾಳಿಮಾತು, ಬೀದಿ ಮಾತು, ಮನಸ್ಸಿನ ಮಾತು ಮೇಳೈಸಿ ಅಂತಿಮವಾಗಿ ‘ಮುಂಗಾರು ಮಳೆ(ಭಾಗ-2)’ ಸುರಿಸಲು ಸಿದ್ಧತೆಗಳು ನಡೆದಿವೆ!
ಹೊಸಬರ ಬೆಳೆಸುವ ಜವಾಬ್ದಾರಿ ಹೊತ್ತಿರುವ ನಿರ್ಮಾಪಕ ಕೃಷ್ಣಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿಲ್ಲ. ಬದಲಿಗೆ ಮುಂಗಾರು ಮಳೆ ನಿರ್ದೇಶಿಸಿದ್ದ ಯೋಗರಾಜ್ ಭಟ್, ಚಿತ್ರದ ನಿರ್ಮಾಪಕರು. ಚಿತ್ರದ ಟೈಟಲ್ಗೆ ಈಗಾಗಲೇ ಕೃಷ್ಣಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೈಟಲ್ ಸಿಗದೇ ಹೋದರೆ, ‘ಪ್ರೀತಂ ಪ್ರೇಮ್ ಕಹಾನಿ’ ಹೆಸರಲ್ಲಿ ಚಿತ್ರ ಸೆಟ್ಟೇರಲಿದೆ.
‘ಮುಂಗಾರು ಮಳೆ’ ಚಿತ್ರದಲ್ಲಿ ನಾಯಕನ ಹೆಸರು ಪ್ರೀತಂ ಹೀಗಾಗಿ, ಚಿತ್ರಕ್ಕೆ ಲಿಂಕ್ ಸಿಗಲಿದೆ ಎನ್ನುವ ಲೆಕ್ಕಾಚಾರ ಚಿತ್ರತಂಡದ್ದು. ‘ಮುಂಗಾರು ಮಳೆ’ ಚಿತ್ರಕ್ಕೆ ಕತೆ ಬರೆದಿದ್ದ ಪ್ರೀತಂ, ಮುಂಗಾರು ಮಳೆ ಎರಡನೇ ಭಾಗದ ನಿರ್ದೇಶಕರು. ಅವರು ಈಗಾಗಲೇ ಚಿತ್ರಕತೆ ಬರೆಯಲು ಕೂತುಬಿಟ್ಟಿದ್ದಾರೆ.
ಚಿತ್ರದ ನಾಯಕ ಎಂದಿನಂತೆ ಗಣೇಶ್. ಆದರೆ ನಾಯಕಿ ಪಾತ್ರಕ್ಕೆ ಸಂಜನಾ ಬದಲಿಗೆ ರಮ್ಯಾ ಬಂದಿದ್ದಾರೆ! ‘ಮುಂಗಾರುಮಳೆ’ ತಂತ್ರಜ್ಞರ ತಂಡವೇ ಎರಡನೇ ಭಾಗದಲ್ಲೂ ಇರಲಿದೆ. ಜುಲೈನಲ್ಲಿ ಚಿತ್ರ ಸೆಟ್ಟೇರಲಿದೆ.
ಹಣದ ಸುರಿಮಳೆ : ಈಗಾಗಲೇ ‘ ಮುಂಗಾರು ಮಳೆ’ 150 ದಿನ ಪೂರೈಸಿದೆ. 35ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.