Don't Miss!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೆಬ್ರವರಿ 7ರಂದು '3ರ್ಡ್ ಕ್ಲಾಸ್' ಪ್ರೇಮಕಥೆ ಬಿಡುಗಡೆ
ಫೆಬ್ರವರಿ 7 ರಂದು ಮೂರ್ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಇದರಲ್ಲಿ '3ರ್ಡ್ ಕ್ಲಾಸ್' ಚಿತ್ರ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಪಕ್ಕಾ ಕಮರ್ಷಿಯಲ್ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಈ ಚಿತ್ರ ಪ್ರಚಾರದ ಹಂತದಲ್ಲೇ ಭಾರಿ ಸದ್ದು ಮಾಡಿದೆ.
ಸಿನಿಮಾದ ಹೆಸರು ಸ್ವಲ್ಪ ವಿಭಿನ್ನವಾಗಿದೆ. ಶೀರ್ಷಿಕೆ '3ರ್ಡ್ ಕ್ಲಾಸ್' ಅಂತ ಇದ್ದರೂ ಸಿನಿಮಾ ಮಾತ್ರ ಬಹಳ ಹೈ-ಫೈ ಆಗಿ ಮೂಡಿ ಬಂದಿದೆ ಎಂಬ ಭರವಸೆ ವ್ಯಕ್ತಪಡಿಸಿದೆ ಚಿತ್ರತಂಡ. ಅದಕ್ಕೆ ತಕ್ಕಂತೆ ಟ್ರೈಲರ್ ಹಾಡುಗಳು ಮೋಡಿ ಮಾಡಿದೆ.
ಕಮರ್ಷಿಯಲ್ ಆಗಿ ಎಲ್ಲ ಅಂಶಗಳ ಕಡೆಯೂ ಗಮನ ಕೊಟ್ಟಿರುವ ಚಿತ್ರತಂಡ ತಂದೆ ಮತ್ತು ಮಗಳ ನಡುವಿನ ಅಸಾಧಾರಣ ಬಂದವನ್ನು ವರ್ಣಿಸಿದೆ. ಮ್ಯೂಸಿಕಲಿ ಹಾಡುಗಳು ಇಂಪಾಗಿದೆ. ಕಾಮಿಡಿ ಕಿಕ್ ಗೆ ಕೊರತೆ ಇಲ್ಲ. ಲವ್ ಜೊತೆ ಸ್ನೇಹ ಸಂಬಂಧ ಬಗ್ಗೆಯೂ ತೋರಿಸಲಾಗಿದೆ. ರೆಗ್ಯುಲರ್ ಕಮರ್ಷಿಯಲ್ ಚಿತ್ರಗಳಂತೆ ಎಲ್ಲ ರೀತಿಯಲ್ಲೂ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದೆ.
ಅಂದ್ಹಾಗೆ, ಜಗದೀಶ್ ಈ ಚಿತ್ರದ ನಾಯಕನಾಗಿದ್ದು, ರೂಪಿಕಾ, ದಿವ್ಯಾ ರಾವ್, ಅವಿನಾಶ್ ಮತ್ತು ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಸಿನಿಮಾ ಮಾಡಿ, ಲಾಭ ಮಾಡಿದ್ರೆ ಸಾಕು ಎನ್ನುವ ಕೆಲವರ ಮಧ್ಯೆ '3ರ್ಡ್ ಕ್ಲಾಸ್' ಚಿತ್ರತಂಡ ಸಮಾಜಮುಖಿ ಕೆಲಸಗಳ ಮೂಲಕ ವಿಶೇಷ ಸ್ಥಾನ ಪಡೆದುಕೊಂಡಿದೆ. ಪ್ರಚಾರಕ್ಕೆ ದುಡ್ಡು ಹಾಕುವ ಹಣದಿಂದ ಒಂದೊಳ್ಳೆಯ ಕೆಲಸಗಳನ್ನು ಮಾಡೋಣ ಎಂದು ನಿರ್ಧರಿಸಿ ಹಲವು ಉಪಯುಕ್ತ ಕೆಲಸಗಳನ್ನು ಮಾಡಿದೆ ಚಿತ್ರತಂಡ. 30 ಜಿಲ್ಲೆಗಳಲ್ಲೂ ರೋಡ್ ಶೋ ಮಾಡಿ, ಪ್ರೆಸ್ ಮೀಟ್ ಮಾಡಿ ಪ್ರಚಾರ ಮಾಡಲಾಗಿದೆ.
ಈ ಹಿಂದೆ ಚಿತ್ರದ ಆಡಿಯೋ ಬಿಡುಗಡೆ ಮಾಡಿದಾಗ 200 ಅಂದ ಹಾಗೂ ಅನಾಥ ಮಕ್ಕಳಿಗೆ ಸುಮಾರು Rs.2,50,000/- ಮೊತ್ತದ ಜೀವ ಹಾಗೂ ಆರೋಗ್ಯದ ವಿಮೆ ಮಾಡಿಕೊಡಲಾಗಿದೆ. ಬಾಗಲಕೋಟೆಯ ಕರ್ಲುಕೊಪ್ಪ ಗ್ರಾಮವನ್ನು ದತ್ತು ಪಡೆದು ಇಡೀ ಚಿತ್ರತಂಡ ಹಳ್ಳಿಯ ಪುನರ್ ವಸತಿ ಕಲ್ಪಿಸುವ ಕೆಲಸ ಮಾಡಿತ್ತು. ಇನ್ನು ಚಾಲಕರಿಗ ತಲಾ 1 ಲಕ್ಷದ ವಿಮೆಯನ್ನು ಸರಿ ಸುಮಾರು 50,000 ಕ್ಕೂ ಅಧಿಕ (ಕರ್ನಾಟಕ ರಾಜ್ಯಾದ್ಯಂತ) ಆಟೋ ಹಾಗೂ ಕ್ಯಾಬ್ ಚಾಲಕರಿಗೆ ವಿಮೆ ಮಾಡಿಸುವುದಾಗಿ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಈ ಕಾರ್ಯ ಪ್ರಗತಿಯಲ್ಲಿದೆ.
7 ಹಿಲ್ಸ್ ಸ್ಟುಡಿಯೋ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದ್ದು, ಅಶೋಕ್ ದೇವ್ ನಿರ್ದೇಶಿಸಿದ್ದಾರೆ. ಜೆಸ್ಸಿ ಗಿಫ್ಟ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಬಿ ಕೆ ಶಾಮ್ ರಾಜ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.