Just In
- 19 min ago
ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್
- 20 min ago
ಆರ್ಆರ್ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
Don't Miss!
- News
ಮುಂಬೈ ಅನ್ನು ಕರ್ನಾಟಕಕ್ಕೆ ಸೇರಿಸಿ: ಉದ್ಧವ್ ಠಾಕ್ರೆಗೆ ಲಕ್ಷ್ಮಣ ಸವದಿ ತಿರುಗೇಟು
- Sports
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಮತ್ತೊಂದು ಚಿಕಿತ್ಸೆ
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- Finance
ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿರುವ ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವಾರ ಕನ್ನಡದಲ್ಲಿ ಯಾವ ಯಾವ ಸಿನಿಮಾಗಳು ಬಿಡುಗಡೆ?
ಶುಕ್ರವಾರ ಬಂದೇ ಬಿಡ್ತು. ಈ ವೀಕೆಂಡ್ ನಲ್ಲಿ ಯಾವ ಚಿತ್ರಕ್ಕೆ ಹೋಗ್ಬೇಕು ಎನ್ನುವ ಪ್ಲಾನ್ ಮಾಡ್ತಿದ್ದೀರಾ..? ಈ ವಾರ ಕನ್ನಡದಲ್ಲಿ ಯಾವ ಸಿನಿಮಾ ರಿಲೀಸ್ ಆಗ್ತಿದೆ ಎಂಬ ಕುತೂಹಲ ಕಾಡ್ತಿದ್ಯಾ? ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಈ ವಾರ ಕನ್ನಡದಲ್ಲಿ ಒಟ್ಟು ನಾಲ್ಕು ಚಿತ್ರಗಳು ತೆರೆ ಕಾಣುತ್ತಿವೆ. ನಾಲ್ಕರಲ್ಲಿ ಯಾವುದು ಬೆಸ್ಟ್ ಎಂದು ತಿಳಿದುಕೊಳ್ಳಬೇಕಾದ್ರೆ, ಆ ಚಿತ್ರಗಳು ಯಾವುದು? ಆ ಚಿತ್ರಗಳ ಸ್ಪೆಷಲಾಟಿ ಏನು ಎಂಬುದರ ಬಗ್ಗೆ ಮೊದಲು ಗಮನಹರಿಸೋಣ...

ರಾಜಹಂಸ
ಈ ವಾರ ತೆರೆ ಕಾಣುತ್ತಿರುವ ನಿರೀಕ್ಷೆಯ ಸಿನಿಮಾ 'ರಾಜಹಂಸ'. ಈ ಚಿತ್ರದ ವಿಶೇಷ ಏನಪ್ಪಾ ಅಂದ್ರೆ, 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ನಾಯಕಿ ಆಗಿ ಕಾಣಿಸಿಕೊಂಡಿರುವ ಮೊದಲ ಚಿತ್ರ. ಈ ಚಿತ್ರಕ್ಕೆ ಜಡೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಗೌರಿ ಶಂಕರ್ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಅಯನ
ಸಾಫ್ಟ್ ವೇರ್ ವ್ಯಕ್ತಿಯ ಸುತ್ತ ಮೂಡಿ ಬಂದಿರುವ ಸಿನಿಮಾ 'ಅಯನ'. ಗಂಗಾಧರ್ ಸಾಲಿಮಠ ಈ ಚಿತ್ರವನ್ನ ನಿರ್ದೇಶಿಸಿದ್ದು, ದೀಪಕ್ ಸುಬ್ರಹ್ಮಣ್ಯ ನಾಯಕನಾಗಿ ನಟಿಸಿದ್ದಾರೆ. ಅಪೂರ್ವ ಸೋಮ ನಾಯಕಿಯಾಗಿದ್ದು, ರಮೇಶ್ ಭಟ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಶ್ರಿಯಾಂಶ್ ಶ್ರೀರಾಮ್ ಅವರ ಸಂಗೀತ, ವರುಣ್ ಡಿಕೆ ಕ್ಯಾಮರಾ ಈ ಚಿತ್ರಕ್ಕಿದೆ.

ದರ್ಪಣ
ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಗೀತರಚನೆ ಹಾಗೂ ನಿರ್ದೇಶನ ಮಾಡಿರುವ ಚಿತ್ರ 'ದರ್ಪಣ'. 'ರಂಗಿತರಂಗ' ಖ್ಯಾತಿಯ ಅರವಿಂದ್ ರಾವ್, ಯತಿರಾಜ್, ಸಂದಿಪ್ ಮಲಾನಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಧನುಷ್, ಸೂರ್ಯೋದಯ, ಹಾಗೂ ಸಚಿನ್ ಅವರ ಛಾಯಾಗ್ರಹಣವಿದೆ. ವಿನೋದ್ ಬಸವರಾಜ್ ಸಂಕಲನ, ರಾಜ್ದೇವ್ ನೃತ್ಯ ನಿರ್ದೇಶನ ಹಾಗೂ ಪವರ್ ಪುಷ್ಪರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಹಳ್ಳಿ ಸೊಗಡು
ನೃತ್ಯ ನಿರ್ದೇಶಕ ಕಪಿಲ್ ರವರು ಕಥೆ, ಚಿತ್ರಕಥೆ, ರಚಿಸಿ ನಿರ್ದೇಶನ ಮಾಡಿರುವ 'ಹಳ್ಳಿ ಸೊಗಡು' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಬ್ಬ ಸಂಗೀತ ಸಾಧನೊಬ್ಬನ ಅಭಿಮಾನಿಯೊಬ್ಬನ ಸಾಧನೆ, ಗುರುಭಕ್ತಿಯಲ್ಲಿ ಎಂಥಾ ಶಕ್ತಿ ಇದೆ ಎಂಬುದನ್ನ ಈ ಚಿತ್ರದಲ್ಲಿ ಹೇಳಲಾಗ್ತಿದೆ. ಅರವ್ ಸೂರ್ಯ ಮತ್ತ ಅಕ್ಷರ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.