Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಅಜಿತ್ ಸದಸ್ಯತ್ವ ರದ್ದತಿಗೆ ವಕೀಲರ ಸಂಘದ ನಿರ್ಣಯ
ಅಷ್ಟಕ್ಕೂ ಈ ಉದಯೋನ್ಮುಖ ನಟ ಮಾಡಿರುವ ಘೋರ ಅಪರಾಧವಾದರೂ ಏನು ಎಂಬುದು ಎಲ್ಲರ ಪ್ರಶ್ನೆ. ಅಜಿತ್, ಪತ್ರಕರ್ತರ ಪರವಾಗಿ ಹೇಳಿಕೆ ನೀಡಿದ್ದಾರೆ, ವಕೀಲರ ಗೂಂಡಾಗಿರಿ ವಿರುದ್ಧ ಮಾತನಾಡಿದ್ದಾರೆ. ಅಜಿತ್ ತಮ್ಮ ಫೇಸ್ಬುಕ್ನಲ್ಲಿ ಪತ್ರಕರ್ತರ ಮೇಲಿನ ವಕೀಲರ ಗೂಂಡಾಗಿರಿಯನ್ನು ಖಂಡಿಸಿದ್ದರು. ಇದರಿಂದ ಕೆಂಡಾಮಂಡಲವಾದ ಲೋಕೇಶ್ ಎಂಬ ವಕೀಲರು ಅಜಿತ್ ವಿರುದ್ಧ ಹರಿಹಾಯ್ದಿದ್ದರು, ಬೆದರಿಕೆಯನ್ನೂ ಒಡ್ಡಿದ್ದರು.
ನಟ ಅಜಿತ್ ಕಾನೂನು ಪದವೀಧರರು. ಸಹಜವಾಗಿ ವಕೀಲರ ಸಂಘದಲ್ಲಿ ಸದಸ್ಯತ್ವ ಹೊಂದಿರುವವರು. ಆದರೆ ಪತ್ರಕರ್ತರ ಮೇಲೆ ವಕೀಲರು ನಡೆಸಿದ ಅಮಾನವೀಯ ಕೃತ್ಯವನ್ನು ಖಂಡಿಸಿದ್ದರಿಂದ ಇದೀಗ ಕೋಪಗೊಂಡಿರುವ ವಕೀಲರ ಸಂಘವೀಗ ಅಜಿತ್ ಸದಸ್ಯತ್ವ ರದ್ಧತಿಗೆ ನಿರ್ಣಯ ಕೈಗೊಂಡಿದೆ.
ಈ ವಿಷಯವನ್ನು ಅಜಿತ್ ಗಮನಕ್ಕೆ ತಂದು ಪ್ರತಿಕ್ರಿಯೆ ಕೇಳಿದಾಗ, ಅಜಿತ್ 'ನೋ ಕಾಮೆಂಟ್ಸ್' ಎಂದು ನಕ್ಕಿದ್ದಾರೆ. ಅವರ ನಗುವಿನಲ್ಲಿ 'ಇದರಿಂದೇನೂ ನನಗೆ ತೊಂದರೆಯಿಲ್ಲ, ನನಗಿದು ನಿರೀಕ್ಷಿತವೇ ಆಗಿತ್ತು' ಎಂಬ ಉತ್ತರ ವ್ಯಕ್ತವಾಗುವಂತಿತ್ತು. (ಒನ್ ಇಂಡಿಯಾ ಕನ್ನಡ)