Don't Miss!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಅಜಿತ್ ಸದಸ್ಯತ್ವ ರದ್ದತಿಗೆ ವಕೀಲರ ಸಂಘದ ನಿರ್ಣಯ
ಅಷ್ಟಕ್ಕೂ ಈ ಉದಯೋನ್ಮುಖ ನಟ ಮಾಡಿರುವ ಘೋರ ಅಪರಾಧವಾದರೂ ಏನು ಎಂಬುದು ಎಲ್ಲರ ಪ್ರಶ್ನೆ. ಅಜಿತ್, ಪತ್ರಕರ್ತರ ಪರವಾಗಿ ಹೇಳಿಕೆ ನೀಡಿದ್ದಾರೆ, ವಕೀಲರ ಗೂಂಡಾಗಿರಿ ವಿರುದ್ಧ ಮಾತನಾಡಿದ್ದಾರೆ. ಅಜಿತ್ ತಮ್ಮ ಫೇಸ್ಬುಕ್ನಲ್ಲಿ ಪತ್ರಕರ್ತರ ಮೇಲಿನ ವಕೀಲರ ಗೂಂಡಾಗಿರಿಯನ್ನು ಖಂಡಿಸಿದ್ದರು. ಇದರಿಂದ ಕೆಂಡಾಮಂಡಲವಾದ ಲೋಕೇಶ್ ಎಂಬ ವಕೀಲರು ಅಜಿತ್ ವಿರುದ್ಧ ಹರಿಹಾಯ್ದಿದ್ದರು, ಬೆದರಿಕೆಯನ್ನೂ ಒಡ್ಡಿದ್ದರು.
ನಟ ಅಜಿತ್ ಕಾನೂನು ಪದವೀಧರರು. ಸಹಜವಾಗಿ ವಕೀಲರ ಸಂಘದಲ್ಲಿ ಸದಸ್ಯತ್ವ ಹೊಂದಿರುವವರು. ಆದರೆ ಪತ್ರಕರ್ತರ ಮೇಲೆ ವಕೀಲರು ನಡೆಸಿದ ಅಮಾನವೀಯ ಕೃತ್ಯವನ್ನು ಖಂಡಿಸಿದ್ದರಿಂದ ಇದೀಗ ಕೋಪಗೊಂಡಿರುವ ವಕೀಲರ ಸಂಘವೀಗ ಅಜಿತ್ ಸದಸ್ಯತ್ವ ರದ್ಧತಿಗೆ ನಿರ್ಣಯ ಕೈಗೊಂಡಿದೆ.
ಈ ವಿಷಯವನ್ನು ಅಜಿತ್ ಗಮನಕ್ಕೆ ತಂದು ಪ್ರತಿಕ್ರಿಯೆ ಕೇಳಿದಾಗ, ಅಜಿತ್ 'ನೋ ಕಾಮೆಂಟ್ಸ್' ಎಂದು ನಕ್ಕಿದ್ದಾರೆ. ಅವರ ನಗುವಿನಲ್ಲಿ 'ಇದರಿಂದೇನೂ ನನಗೆ ತೊಂದರೆಯಿಲ್ಲ, ನನಗಿದು ನಿರೀಕ್ಷಿತವೇ ಆಗಿತ್ತು' ಎಂಬ ಉತ್ತರ ವ್ಯಕ್ತವಾಗುವಂತಿತ್ತು. (ಒನ್ ಇಂಡಿಯಾ ಕನ್ನಡ)