Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಮಾ ಹರೀಶ್ ರಿಂದ ದರ್ಶನ್, ಸತ್ಯಾಗೆ ಸನ್ಮಾನ
ಮೆಜೆಸ್ಟಿಕ್ ಚಿತ್ರದ ಮೂಲಕ 2002ರಲ್ಲಿ ನಾಯಕನಟ, ಸ್ಟಾರ್ ಆದ ದರ್ಶನ್, ಇದೀಗ ಬರೋಬ್ಬರಿ ಹತ್ತು ವರ್ಷಗಳನ್ನು ಪೂರೈಸಿದ್ದಾರೆ. ದರ್ಶನ್ ನಾಯಕತ್ವದ ಮೊಟ್ಟಮೊದಲ ಸಿನಿಮಾ ನಿರ್ಮಿಸಿ, ನಿರ್ದೆಶಕ ಪಿ ಎನ್ ಸತ್ಯಾ ಹಾಗೂ ದರ್ಶನ್ ಅವರನ್ನು ಕನ್ನಡಚಿತ್ರರಂಗಕ್ಕೆ ಪರಿಚಯಸಿ ಅವರು ಇಂದು ನಿಂತಿರುವ ಜಾಗಕ್ಕೆ ಕಾರಣಕರ್ತರು ನಿರ್ಮಾಪಕ ಬಾಮಾ ಹರೀಶ್. ಆದರೆ ಅವರೇ ಮುಂದೆ ನಿಂತು ತಾವು ನೆಟ್ಟುಬೆಳೆಸಿದ ಕುಡಿಗೆ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದು ವಿಶೇಷವಾಗಿತ್ತು.
ಆದರೆ ಅದು, ಇತ್ತೀಚಿಗೆ ಅವರು ನಿರ್ಮಿಸಿ ಬಿಡುಗಡೆಗೆ ಸಜ್ಜಾಗಿರುವ ಮಾಗಡಿ ಚಿತ್ರದ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಕೂಡ ಎಂಬುದು ಸ್ಪಷ್ಟವಾಗಿಯೇ ಕಂಡುಬಂತು. ಅದು ತಪ್ಪೇನಲ್ಲ, ಏಕೆಂದರೆ ತಮ್ಮ ಚಿತ್ರದ ಪ್ರಚಾರಕ್ಕೆ ಏನೋನೋ ಗಿಮಿಕ್ ಗಳನ್ನು ಮಾಡುವ ನಿರ್ಮಾಪಕ ಮಧ್ಯೆ, ಹರೀಶ್ ಅವರು ಹತ್ತು ವರ್ಷ ಪೂರೈಸಿದ ನಟ ದರ್ಶನ್ ಹಾಗೂ ನಿರ್ದೇಶಕ ಸತ್ಯಾರಿಗೆ ಸನ್ಮಾನವನ್ನೂ ಇಟ್ಟುಕೊಂಡಿದ್ದು ವಿಭಿನ್ನ ಹಾಗೂ ವಿಶೇಷ ಎನಿಸುವುದಲ್ಲವೇ?
ಆದರೆ, ಸನ್ಮಾನ ಕಾರ್ಯಕ್ರಮಕ್ಕೆ ದರ್ಶನ್ ಬಂದಿರಲಿಲ್ಲ, ಬದಲಿಗೆ ವಿಜಯಲಕ್ಷ್ಮಿ ಬಂದಿದ್ದರು. ದರ್ಶನ್ ಗೈರುಹಾಜರಿಯಲ್ಲಿ ದರ್ಶನ್ ಪರವಾಗಿ ವಿಜಯಲಕ್ಷ್ಮಿಗೆ ಹಾಗೂ ನಿರ್ದೇಶಕ ಸತ್ಯಾರಿಗೆ ಸನ್ಮಾನ ಸಮಾರಂಭ ನಡೆಯಿತು. "ಮೆಜೆಸ್ಟಿಕ್ ಚಿತ್ರದ ಮೂಲಕ ದರ್ಶನ್ ಅವರನ್ನು ನಾಯಕರನ್ನಾಗಿ ಮಾಡಿ ಇಂದು ದರ್ಶನ್ ತಲುಪಿರುವ ಈ ಮಟ್ಟಕ್ಕೆ ಭಾಮಾ ಹರೀಶ್ ಅವರೇ ಕಾರಣ. ಅವರ ಕುಟುಂಬ ಯಾವತ್ತೂ ಚೆನ್ನಾಗಿರಲಿ" ಎಂದರು ಸನ್ಮಾನ ಸ್ವೀಕರಿಸಿದ ವಿಜಯಲಕ್ಷ್ಮಿ. ಮುಂದಿನ ಪುಟ ನೋಡಿ...