ದರ್ಶನ್ ಬರಲಿಲ್ಲ; ವಿಜಯಲಕ್ಷ್ಮಿಗೆ ಮಾಲಾರ್ಪಣೆ
ಇನ್ನು ಪಿ ಎನ್ ಸತ್ಯಾ ಮಾತನಾಡಿ "ಏನೂ ಆಗಿಲ್ಲದಿದ್ದ ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟು ನಾನೊಬ್ಬ ಸ್ಯಾಂಡಲ್ ವುಡ್ ನಿರ್ದೇಶಕ ಎನಿಸಿಕೊಳ್ಳಲು ಕಾರಣಕರ್ತರು ಭಾಮಾ ಹರೀಶ್. ಅವರನ್ನು ನಾನು ಯಾವತ್ತಿಗೂ ಮರೆಯಲಾರೆ. ಆದರೆ ನಂತರ ಯಾವುದೇ ನಿರ್ದೇಶನಕ್ಕೆ ಅವರು ನನ್ನನ್ನು ಕರೆದಿಲ್ಲ. ಮುಂದೆ ನನ್ನನ್ನು ಕರೆದು ಕೆಲಸ ಕೊಡಲಿ" ಎಂದು ಕೃತಜ್ಞತೆಯ ಹೇಳುವುದರ ಜೊತೆಗೆ ನಿರೀಕ್ಷೆಯನ್ನು ಹೊರಗೆಡವುತ್ತಾ 'ಸತ್ಯ'ವಾಗಿಯೂ ಕಣ್ಣೀರಾದರು ಸತ್ಯ.
ಕಾರ್ಯಕ್ರಮಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆಸಿ ಚಂದ್ರಶೇಖರ್, ನಿರ್ಮಾಪಕ ಸಾರಾ ಗೋವಿಂದು, ಹಂಚಿಕೆದಾರ ಸನತ್ ವೆಂಚರ್ಸ್ ಪ್ರಸಾದ್, ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಥಾಮಸ್ ಡಿಸೋಜಾ ಹಾಜರಿದ್ದರು. ಅವರ ಜೊತೆ ವೇದಿಕೆಯಲ್ಲಿ ಮಾಗಡಿ ಚಿತ್ರದ ನಾಯಕನಟ ದೀಪಕ್, ಮಾಗಡಿ ನಿರ್ಮಾಪಕರಾದ ಭಾಮಾ ಹರೀಶ್, ಅವರ ಸಹೋದರ ದಿವಾಕರ್ ಕೂಡ ಆಸೀನರಾಗಿದ್ದರು.
ದರ್ಶನ್ ಗೈರು ಹಾಜರಿ ಎದ್ದು ಕಾಣುತ್ತಿದ್ದರೂ ಸನ್ಮಾನ ಸಮಾರಂಭ ಇನ್ಯಾವುದೇ ತೊಡಕಿಲ್ಲದೇ ಲೀಲಾಜಾಲವಾಗಿ ನಡೆಯಿತು. ನಿರ್ಮಾಪಕ ಭಾಮಾ ಹರೀಶ್ ಹಾಗೂ ದಿವಾಕರ್ ಅವರ ಮುಗುಳ್ನಗುವಿನ ಸ್ವಾಗತ ಹಾಗೂ ಬೀಳ್ಕೊಡುಗೆಯನ್ನು ಸ್ಮರಿಸುತ್ತಾ ಮಾಧ್ಯಮದವರು ಸಭಾಂಗಣದಿಂದ ಈಚೆ ಬರುತ್ತಿದ್ದಂತೆ ದರ್ಶನ್ ಹಾಗೂ ಸತ್ಯಾರ ಸನ್ಮಾನ ಸಮಾರಂಭಕ್ಕೆ ಮಂಗಳ ಹಾಡಲಾಯ್ತು.


Click it and Unblock the Notifications











