Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿನಗರಕ್ಕೆ ಬಂದ ಎಂಬಿಬಿಎಸ್ ಡಾಕ್ಟರ್ ಭಾರತಿ
ಕನ್ನಡ ಚಿತ್ರೋದ್ಯಮಕ್ಕೆ ಲೇಡಿ ಡಾಕ್ಟರ್ ಒಬ್ಬರ ಆಗಮನವಾಗಿದೆ. ಆದರೆ ಅವರು ಬಂದಿರುವುದು ರೋಗಿಗಳ ಎದೆ ಮೇಲೆ ಸ್ಟೆತಸ್ಕೋಪ್ ಇಡೋದಕ್ಕೂ ಅಲ್ಲ, ಇಂಜೆಕ್ಷನ್ ಚುಚ್ಚೋದಕ್ಕೂ ಅಲ್ಲ. ಚಿತ್ರರಸಿಕ ಹೃದಯಕ್ಕೆ ನೇರವಾಗಿ ಲಗ್ಗೆ ಹಾಕಲು ಬರುತ್ತಿದ್ದಾರೆ.
ಹೆಸರು ಡಾ.ಭಾರತಿ ವೀರಣ್ಣ. ಓದಿದ್ದು ಎಂಬಿಬಿಎಸ್, ಆದರೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಬಣ್ಣದ ಜಗತ್ತು. ಆದಿಚುಂಚನಗಿರಿ ಕಾಲೇಜಲ್ಲಿ ವೈದ್ಯ ಪದವಿಯನ್ನು ಪಡೆದಿರುವ ಅವರು, ಅಭಿನಯ ನನ್ನ ಮುಖ್ಯ ವೃತ್ತಿಯಲ್ಲ. ವೈದ್ಯಕೀಯವೇ ನನ್ನ ಮೊದಲ ಆದ್ಯತೆ ಎನ್ನುತ್ತಾರೆ.
ಅಭಿನಯನದ ಮೇಲಿನ ಅಪಾರ ಆಕರ್ಷಣೆ ಅವರನ್ನು ಬಣ್ಣ ಜಗತ್ತಿಗೆ ಎಳೆದು ತಂದಿದೆ. ಅಭಿನಯ ತರಂಗದಲ್ಲಿ ನಟನೆಯ ಅ ಆ ಇ ಈ ಕೂಡ ಅಭ್ಯಾಸ ಮಾಡಿದ್ದಾರೆ. ಅಷ್ಟೇ ಅಲ್ಲ ಡಾ.ಭಾರತಿ ಅವರು ಭರತನಾಟ್ಯ ಕಲಾವಿದೆಯೂ ಹೌದು.
ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿರುವ 'ಕೃಷ್ಣ ಸನ್ ಆಫ್ ಸಿಎಂ' ಚಿತ್ರದಲ್ಲಿ ನಾಯಕಿಯಾಗಿ ಡಾ. ಭಾರತಿ ಕಾಣಿಸಲಿದ್ದಾರೆ. ಈಗಾಗಲೆ ಬೀದರ್ ಸುತ್ತಮುತ್ತ 21 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಎಂ ಎಸ್ ರಮೇಶ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಯೋಗಿಶ್ ಹುಣಸೂರು ನಿರ್ಮಿಸಿದ್ದಾರೆ. (ಒನ್ಇಂಡಿಯಾ ಕನ್ನಡ)