Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ಸ್ಯಾಂಡಲ್ ವುಡ್ ನಲ್ಲಿ 6 ಕನ್ನಡ ಸಿನಿಮಾಗಳು ಬಿಡುಗಡೆ
ಸ್ಯಾಂಡಲ್ ವುಡ್ ನಲ್ಲಿ ಈ ವಾರ ವಿಭಿನ್ನ, ವಿಶೇಷವಾದ 6 ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಡುತ್ತಿದೆ. ಲವ್, ಆಕ್ಷನ್, ಹಾರರ್, ಸಸ್ಪೆನ್ಸ್ ಥ್ರಿಲ್ಲರ್, ಹೀಗೆ ಎಲ್ಲ ರೀತಿಯ ಚಿತ್ರಗಳು ತೆರೆಗೆ ಬರುತ್ತಿದೆ.
ಈ ಚಿತ್ರಗಳ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರವೊಂದು ರಿ-ರಿಲೀಸ್ ಆಗ್ತಿದೆ.
ಹಾಗಿದ್ರೆ, ಈ ವಾರ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿರುವ 6 ಚಿತ್ರಗಳು ಯಾವುದು? ಆ ಚಿತ್ರಗಳ ವಿಶೇಷತೆ ಏನು ಎಂಬುದು ಮುಂದೆ ನೀಡಲಾಗಿದೆ. ಮುಂದೆ ಓದಿ.....
ಚಿತ್ರ: 'ಟೈಗರ್ ಗಲ್ಲಿ'
ನಿರ್ದೇಶಕ: ರವಿ ಶ್ರೀವತ್ಸ
ಕಲಾವಿದರು: ಸತೀಶ್ ನೀನಸಾಂ, ಭಾವನ ರಾವ್, ರೋಷಣಿ ಪ್ರಕಾಶ್, ಯಮುನ ಶ್ರೀನಿಧಿ, ಶಿವಮಣಿ ಮತ್ತು ಇತರರು.
ತಾಂತ್ರಿಕ ತಂಡ: ಶ್ರೀಧರ್ ಸಂಭ್ರಮ್ ಅವರ ಸಂಗೀತ, ಮ್ಯಾಥಿವ್ ಛಾಯಾಗ್ರಹಣ
ಚಿತ್ರದ ವಿಶೇಷ: ಇದೊಂದು ನೈಜ ಕಥೆ. ನಾಯಕ ಸತೀಶ್ ಅವರ ವಿಭಿನ್ನ ಸಿನಿಮಾ. ಕನ್ನಡ ಖ್ಯಾತ ನಿರ್ದೇಶಕರು ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರುವುದು ವಿಶೇಷ.
ಚಿತ್ರ: ಸರ್ವಸ್ವ
ನಿರ್ದೇಶಕ: ಶ್ರೇಯಸ್ ಕಬಾಡಿ
ಕಲಾವಿದರು: ತಿಲಕ್ (ಉಗ್ರಂ), ಚೇತನ್, ರೇಣುಶಾ, ಸಾತ್ವಿಕಾ
ತಾಂತ್ರಿಕ ತಂಡ: ಸಂಗೀತ ನಿರ್ದೇಶಕ ವಿ. ಶ್ರೀಧರ್ ಸಂಭ್ರಮ್, ಭೂಪಿಂದರ್ ಪಾಲ್ಸಿಂಗ್ ರೈನಾ ಛಾಯಾಗ್ರಹಣ,
ಚಿತ್ರದ ವಿಶೇಷ: 'ಸರ್ವಸ್ವ' ಒಂದು ಕೌಟುಂಬಿಕ ಸಿನಿಮಾ. ಲವ್, ಆಕ್ಷನ್, ಥ್ರಿಲ್ಲರ್ ಎಲ್ಲ ರೀತಿಯ ಅಂಶಗಳನ್ನ ಒಳಗೊಂಡಿದೆ.
ಚಿತ್ರ: ಮುತ್ತಣ್ಣ
ನಿರ್ದೇಶಕ: ಎಂ.ಎಸ್ ರಾಜಶೇಖರ್
ಕಲಾವಿದರು: ಶಿವರಾಜ್ ಕುಮಾರ್, ಶಶಿಕುಮಾರ್, ಸುಪ್ರಿಯಾ, ಸ್ನೇಹ ಮತ್ತು ಇತರರು
ತಾಂತ್ರಿಕ ತಂಡ: ಹಂಸಲೇಖ ಸಂಗೀತ, ಮಧುಸೂದನ್ ಛಾಯಾಗ್ರಹಣ
ಚಿತ್ರದ ವಿಶೇಷ: 1994ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ. ಡಿಜಿಟಲ್ ಸೌಂಡ್ ಮತ್ತು ವಿಶ್ಯೂಲ್ ಎಫೆಕ್ಟ್ ಬಳಸಿ ಮತ್ತೆ ರಿ-ರಿಲೀಸ್ ಆಗುತ್ತಿದೆ.
ಚಿತ್ರ: ಮೋಜೋ
ನಿರ್ದೇಶಕ: ಶ್ರೀಷಾ ಬೆಳಕವಾಡಿ
ಕಲಾವಿದರು: ಮನು (ನಾಯಕ), ಅನುಷಾ (ನಾಯಕಿ), ಸಂದೀಪ್ ಶ್ರೀಧರ್, ನಂದನ್ ಜಾಂಟಿ, ಸ್ಮಿತಾ ಕುಲಕರ್ಣಿ, ಆನ್ಯಾ ಶೆಟ್ಟಿ
ತಾಂತ್ರಿಕ ತಂಡ: ಎಸ್.ಡಿ. ಅರವಿಂದ್ ಸಂಗೀತ, ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನೆಲೆ ಸಂಗೀತ, ಅನಂತ ಅರಸ್ ಛಾಯಾಗ್ರಾಹಕ
ಚಿತ್ರದ ವಿಶೇಷ: ಇದೊಂದು ಕ್ರೈಂ ಕಮ್ ಹಾರರ್ ಥ್ರಿಲ್ಲರ್ ಸಿನಿಮಾ. ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ.
ಚಿತ್ರ: ಬ್ರ್ಯಾಂಡ್
ನಿರ್ದೇಶಕ: ಪ್ರಶಾಂತ ಕೆ.ಶೆಟ್ಟಿ ('ಮನಸಿನ ಪುಟದಲಿ' ಮೊದಲ ಚಿತ್ರ)
ಕಲಾವಿದರು: ಪ್ರಶಾಂತ ಕೆ.ಶೆಟ್ಟಿ (ನಾಯಕ), ರಚಿತ ಹಾಗೂ ಸೌಮ್ಯ ನಾಯಕಿ, ಸಂಚಾರಿ ವಿಜಯ್, ಶೋಭ್ ರಾಜ್ ಮತ್ತು ಇತರರು
ತಾಂತ್ರಿಕ ತಂಡ: ವಿನು ಮನಸು ಅವರ ಸಂಗೀತ, ದೀಪು ಹೊನ್ನಳ್ಳಿ, ರಾಜಕುಮಾರ್ ಛಾಯಾಗ್ರಹಣ
ಚಿತ್ರದ ವಿಶೇಷ: ಕಾರ್ ಡೀಲರ್ ಒಬ್ಬನ ಆಸೆ, ಆಕಾಂಕ್ಷೆ, ಜೀವನದ ಕಥೆ ಈ ಚಿತ್ರದಲ್ಲಿದೆ. ಬ್ರಾಂಡ್ ಹಿಂದೆ ಬೀಳಬೇಡಿ ಎಂಬ ಸಂದೇಶ ಈ ಚಿತ್ರದಲ್ಲಿದೆ.
ಚಿತ್ರ: ಡಮ್ಕಿ ಡಮಾರ್
ನಿರ್ದೇಶಕ: ಪ್ರದೀಪ್ ವರ್ಮಾ
ಕಲಾವಿದರು: ಪ್ರದೀಪ್ ವರ್ಮಾ (ನಾಯಕ), ಚೈತ್ರಶೆಟ್ಟಿ, ಜಗದೀಶ್, ವೆಂಕಿ, ಅನುಷ್ಕಶೆಟ್ಟಿ, ರಾಜೇಶ್, ಶಿವಾನಂದ್ ಮತ್ತು ಇತರರು
ತಾಂತ್ರಿಕ ತಂಡ: ಪ್ರದೀಪ್ ವರ್ಮಾ ಸಂಗೀತ (ನಾಯಕ, ನಿರ್ದೇಶಕನೂ ಇವರೇ), ವೇಲ್ಸ್ ಛಯಾಗ್ರಹಣ,