Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಳೆ (ಶುಕ್ರವಾರ) ಆರು ಕನ್ನಡ ಚಿತ್ರಗಳ ಬಿಡುಗಡೆ
ಶುಕ್ರವಾರ ಅಂದ್ರೆ ಸಿನಿ ಹಬ್ಬ. ಈ ವಾರ ಆರು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿದೆ. ವಿಶೇಷ ಅಂದರೆ, ಈ ಎಲ್ಲವೂ ಹೊಸ ನಿರ್ದೇಶಕರ ಸಿನಿಮಾಗಳಾಗಿವೆ.
'ಉಂಡುಬಾ', 'ನನ್ನ ಪ್ರಕಾರ', 'ರಾಂಧವ', 'ಫ್ಯಾನ್', 'ಕಲ್ಪನಾ ವಿಲಾಸಿ', 'ವಿಜಯಯಾತ್ರ' ಈ ವಾರ ಆಗಸ್ಟ್ 23 ರಂದು ರಿಲೀಸ್ ಆಗುತ್ತಿರುವ ಸಿನಿಮಾಗಳಾಗಿವೆ.
'ಗೀತಾ' ಸಿನಿಮಾಗೆ ಪುನೀತ್ ರಾಜ್ ಕುಮಾರ್ ಗಾಯಕ
'ಉಂಡುಬಾ' ಪಕ್ಕಾ ಆಕ್ಷನ್ ಕಮ್ ಲವ್ ಸ್ಟೋರಿ ಹೊಂದಿದ್ದು, ಕಡಲ ತೀರದ ಕಥೆ ಹೊಂದಿದೆ. ಈಗಾಗಲೇ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ನಟ ಪವನ್ ಉದ್ದದ ಡೈಲಾಗ್ ಹೇಳಿ ದಾಖಲೆ ಮಾಡಿದ್ದಾರೆ. ನಾಯಕಿಯಾಗಿ ಚಿರಶ್ರೀ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಚಿತ್ರದ ನಿರ್ದೇಶನ ಮಾಡಿದ್ದು, ಹೇಮಂತ್ ರಾವ್ ಹಾಗೂ ವೆಂಕಟ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.
'ನನ್ನ ಪ್ರಕಾರ' ಪ್ರಿಯಾ ಮಣಿ, ಕಿಶೋರ್ ಹಾಗೂ ಮಯೂರಿ ನಟನೆಯ ಸಿನಿಮಾವಾಗಿದೆ. ವಿನಯ್ ಬಾಲಾಜಿ ಚಿತ್ರದ ನಿರ್ದೇಶನ ಮಾಡಿದ್ದಾರೆ.
'ರಾಂಧವ' ಭುವನ್ ಪೊನ್ನಣ್ಣ ನಟನೆಯ ಸಿನಿಮಾವಾಗಿದೆ. ಸುನೀಲ್ ಆಚಾರ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ.
'ಬಡವ ರಾಸ್ಕಲ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್
ಈ ಸಿನಿಮಾಗಳ ಜೊತೆಗೆ 'ಫ್ಯಾನ್', 'ಕಲ್ಪನಾ ವಿಲಾಸಿ', ಹಾಗೂ 'ವಿಜಯಯಾತ್ರ' ಚಿತ್ರಗಳು ಸಹ ಇದೇ ಶುಕ್ರವಾರ ಚಿತ್ರಮಂದಿರಕ್ಕೆ ಆಗಮಿಸುತ್ತಿದೆ.