Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಳೆ (ಶುಕ್ರವಾರ) ಕನ್ನಡದ 6 ಸಿನಿಮಾಗಳು ಬಿಡುಗಡೆ
ಈ ಶುಕ್ರವಾರ ಕನ್ನಡದಲ್ಲಿ ಆರು ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ದೃಶ್ಯ, ಗಿರ್ಮಿಟ್, ಕಪಟ ನಾಟಕ ಪಾತ್ರಧಾರಿ, ಪಾಪಿ ಚಿರಾಯು, ಈಶ ಮಹೇಶ, ರಣಭೂಮಿ ನಾಳೆ ರಿಲೀಸ್ ಆಗುತ್ತಿರುವ ಸಿನಿಮಾಗಳಾಗಿವೆ.
'ಆ ದೃಶ್ಯ' ರವಿಚಂದ್ರನ್ ನಟನೆಯ ಸಿನಿಮಾ. ಶಿವ ಗಣೇಶ್ ಚಿತ್ರದ ನಿರ್ದೇಶಕ, ಕೆ ಮಂಜು ಈ ಸಿನಿಮಾಗೆ ಹಣ ಹಾಕಿದ್ದಾರೆ. ಇದೊಂದು ಮರ್ಡರ್ ಮಿಸ್ಟರಿ ಸಿನಿಮಾವಾಗಿದೆ. ರವಿಚಂದ್ರನ್ ಲುಕ್ ಬದಲಾಗಿದೆ. ಎರಡು ವಿಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಚ್ಚುತ್ ಕುಮಾರ್, ರಮೇಶ್ ಭಟ್, ಯಶ್ ಶೆಟ್ಟಿ, ಅರ್ಜುನ್ ಗೌಡ, ಚೈತ್ರ ಆಚಾರ್ ಸಿನಿಮಾದ ಕಲಾವಿದರಾಗಿದ್ದಾರೆ.
'ಫ್ಯಾನ್ಸ್ ವಾರ್' ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಮಾತು
'ಗಿರ್ಮಿಟ್' ಪಕ್ಕಾ ಕಮರ್ಷಿಯಲ್ ಮಕ್ಕಳ ಸಿನಿಮಾ. 'ಕೆಜಿಎಫ್' ಸಂಗೀತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹೊಸ ಪ್ರಯತ್ನ. ಸಿನಿಮಾದ ಟ್ರೇಲರ್ ತುಂಬ ಚೆನ್ನಾಗಿದೆ. ನಟ ಯಶ್, ರಾಧಿಕಾ ಪಂಡಿತ್ ಸಿನಿಮಾಗೆ ಡಬ್ ಮಾಡಿದ್ದಾರೆ. ಮಕ್ಕಳ ಪಾತ್ರಗಳಿಗೆ ಕನ್ನಡದ ಕಲಾವಿದರು ಧ್ವನಿ ನೀಡಿದ್ದಾರೆ. ಮಕ್ಕಳ ಸಿನಿಮಾ ಆದರು, ಅದನ್ನು ಚಿತ್ರೀಕರಣ ಮಾಡಿರುವ ರೀತಿ ತುಂಬ ಚೆನ್ನಾಗಿದೆ.
'ಕಪಟ ನಾಟಕ ಪಾತ್ರಧಾರಿ' ಆಟೋ ಡ್ರೈವರ್ ಕಥೆ. ಹುಲಿರಾಯ ಸಿನಿಮಾದ ನಂತರ ಬಾಲು ನಾಗೇಂದ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ಭಟ್ ನಾಯಕಿಯಾಗಿದ್ದಾರೆ. ಸಿನಿಮಾದ ಟ್ರೇಲರ್ ಹಾಡುಗಳು ಚೆನ್ನಾಗಿವೆ. ಕ್ರಿಶ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.
'ಆ ದೃಶ್ಯ' ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಯ್ತು
ಈ ಮೂರು ಸಿನಿಮಾಗಳ ಜೊತೆಗೆ 'ರಣಭೂಮಿ', 'ಪಾಪಿ ಚಿರಾಯು' ಹಾಗೂ 'ಈಶ ಮಹೇಶ' ಸಿನಿಮಾಗಳು ನಾಳೆಯೇ ಬಿಡುಗಡೆ ಆಗುತ್ತಿವೆ.